ಇಹ್ಸಾನ್ ಕರ್ನಾಟಕ ಎಜು ಚಾರಿಟೆಬಲ್ ಟ್ರಸ್ಟ್‍ ನೂತನ ಕಟ್ಟಡ ಶಾಸಕರಿಂದ ಉದ್ಘಾಟನೆ

Suddivijaya
Suddivijaya July 11, 2022
Updated 2022/07/11 at 12:12 AM

ಸುದ್ದಿವಿಜಯ, ಜಗಳೂರು: ಇಲ್ಲಿನ ಇಹ್ಸಾನ್ ಕರ್ನಾಟಕ ಎಜು ಮತ್ತು ಚಾರಿಟೆಬಲ್ ಟ್ರಸ್ಟ್‍ವತಿಯಿಂದ ಜು.13ರಂದು ಮಾಝಿನ್ ಹೆರಿಟೇಜ್ ದಾರುಲ್ ಉಲೂಂ ಇಹ್ಸಾನಿಯ್ಯಾ ನೂತನ ಕಟ್ಟಡದ ಉದ್ಘಾಟನೆ ನೆರವೇರಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಮೌಲಾನ್ ಷಾವುಲ್ಲಾ ಅಮಿತ್ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನಮ್ಮ ಸಮಿತಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಎಬ್ಬಿಸಿದೆ. ಈ ಭಾಗದ ಹತ್ತಾರು ಜಿಲ್ಲೆಗಳಲ್ಲಿ ವಿದ್ಯಾ ಸಂಸ್ಥೆಗಳನ್ನು ನಿರ್ಮಿಸಿದೆ.

ಈಗ ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ಕೆ.ಸಿಎಫ್ ಒಮಾನ್ ಪ್ರಾಯೋಜಕತ್ವದಲ್ಲಿ ನಿರ್ಮಾಣ ಗೊಂಡ ಮಾಝಿನ್ ಹೆರಿಟೇಜ್ ಕಟ್ಟಡದ ಉದ್ಘಾಟನೆಗೆ ಹಝ್ರತ್ ಡಾ. ಮಹಮದ್, ಫಾಝಿಲ್ ರಝ್ಜಿ ಕಾವಳಕಟ್ಟೆ, ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಎನ್.ಕೆ ಎಂ ಶಾಫಿ ಸಅದಿ, ಇಹ್ಸಾನ್ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಐ ಅಬ್ದುಲ್, ಹಫೀಳ್ ಸಅದಿ, ಶಾಸಕ ಎಸ್.ವಿ ರಾಮಚಂದ್ರ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಹ್ಸಾನ್ ಕರ್ನಾಟಕದ ಮುಖಂಡರಾದ ಮಹಮದ್ ಇಸಾಕ್, ಶಫೀವುಲ್ಲಾ, ಹಿಜಾಮ್‍ಖಾನ್, ಮಹಮದ್ ಹರಫಾಲ್ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!