ಬೈಕ್ ಅಪಘಾತದಲ್ಲಿ ಪಶು ಸಹಾಯಕ ಅಧಿಕಾರಿ ಸಾವು.

Suddivijaya
Suddivijaya September 1, 2022
Updated 2022/09/01 at 9:07 AM

ಸುದ್ದಿವಿಜಯ ಜಗಳೂರು.ಕರ್ತವ್ಯ ಮುಗಿಸಿಕೊಂಡು ಕಛೇರಿಯತ್ತಾ ಬರುತ್ತಿದ್ದ ಪಶು ವೈದ್ಯರ ಸಹಾಯಕ ಅಧಿಕಾರಿಯೊಬ್ಬ ಬೈಕ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಗಳೂರು ತಾಲೂಕಿನ ಭರಮಸಮುದ್ರ ಬಳಿ ಗುರುವಾರ ಮದ್ಯಾಹ್ನ ಸಂಭವಿಸಿದೆ.

ಇಲ್ಲಿನ ಪಶು ಇಲಾಖೆ ವೈದ್ಯರ ಸಹಾಯಕ ಅಧಿಕಾರಿ ಕೆಚ್ಚೇನಹಳ್ಳಿ ಕೆ.ಬಿ ಹರೀಶ್ (33)ಮೃತ ವ್ಯಕ್ತಿ.
ಹುಚ್ಚಂಗಿಪುರ ಗ್ರಾಮದ ಕರಿಯಪ್ಪ, ಲಿಂಗರಾಜ್ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಸ್ಟೂರು ಗ್ರಾಮದಿಂದ ಕರ್ತವ್ಯ ಮುಗಿಸಿಕೊಂಡ ಕೆ.ಬಿ ಹರೀಶ್ ಜಗಳೂರಿನ ಕಡೆ ಬೈಕ್ ನಲ್ಲಿ ಬರುತ್ತಿದ್ದ, ಹುಚ್ಚಂಗಿಪುರದ ಕರಿಯಪ್ಪ,ಲಿಂಗರಾಜ್ ದೊಣೆಹಳ್ಳಿ ಮಾರ್ಗವಾಗಿ ತೆರಳುವಾಗಿ ಭರಮಸಮುದ್ರ ಕ್ರಾಸ್ ಸಮೀಪ ಎರಡು ಬೈಕ್ ಗಳ‌ ನಡುವೆ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿದ್ದಾರೆ.

ಮೂರು ಜನರು ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ, ಸಾರ್ವಜನಿಕರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ತೀವ್ರ ಪೆಟ್ಟು ಬಿದ್ದಿದ್ದ ಹರೀಶ್ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡ ಇಬ್ಬರು‌ ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ‌ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ‌ ದೂರು‌ ದಾಖಲಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!