ಜಗಳೂರು: ಸಾಗಲಗಟ್ಟೆ ಗ್ರಾಮಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಭೇಟಿ ಪೋಷಕರಿಗೆ ಸಾಂತ್ವನ

Suddivijaya
Suddivijaya August 25, 2022
Updated 2022/08/25 at 1:26 PM

ಸುದ್ದಿವಿಜಯ, ಜಗಳೂರು: ಮೆದಗಿನಕೆರೆ ಮೊರಾರ್ಜಿ ವಸತಿಶಾಲೆಯಲ್ಲಿ ಇತ್ತೀಚೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುನೀಲ್ ಎಂಬ ವಿದ್ಯಾರ್ಥಿ ಗ್ರಾಮವಾದ ಸಾಗಲಗಟ್ಟೆ ಗ್ರಾಮಕ್ಕೆ ಗುರುವಾರ ಶಾಸಕ ಎಸ್.ವಿ.ರಾಮಚಂದ್ರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.

ಸಾಗಲಗಟ್ಟೆ ಗ್ರಾಮಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಭೇಟಿ ಪೋಷಕರಿಗೆ ಸಾಂತ್ವನ
ಸಾಗಲಗಟ್ಟೆ ಗ್ರಾಮಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಭೇಟಿ ಪೋಷಕರಿಗೆ ಸಾಂತ್ವನ

ಇಂತಹ ಘಟನೆ ನಡೆಯಬಾರದಿತ್ತು. ಮಗುವನ್ನು ಕಳೆದುಕೊಂಡ ದುಃಖ ಪೋಷಕರಲ್ಲಿ ಸದಾ ಇರುತ್ತದೆ. ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ. ಸರಕಾರದಿಂದ ಬರುವ ಸವಲತ್ತು ಕೊಡಿಸುತ್ತೇವೆ. ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಈ ವೇಳೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಬಿಜೆಪಿ ಮುಖಂಡರಾದ ಮಾಗಡಿ ಮಂಜುನಾಥ್, ಅರವಿಂದ್‍ಪಾಟೀಲ್, ಪಪಂ ಸದಸ್ಯ ಪಾಪಲಿಂಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!