ಜಗಳೂರಿನಲ್ಲಿ ಸುರಿದ ತುಂತುರು ಮಳೆಗೆ, ತಂಪರೆದ ಭೂಮಿ

Suddivijaya
Suddivijaya April 6, 2023
Updated 2023/04/06 at 3:59 PM

Suddivijaya|Kannada News|06-04-2023

ಸುದ್ದಿವಿಜಯ,ಜಗಳೂರು:ಬಿರುಬಿಸಿಲಿ ಬೇಗೆಗೆ ಬೇಸತ್ತಿದ್ದ ಜನತೆಗೆ ಗುರುವಾರ ಕೆಲಕಾಲ ಪಟ್ಟಣ ಸೇರಿದಂತೆ ಜಗಳೂರು ತಾಲೂಕಿನ ಸುತ್ತಲಿನ ಗ್ರಾಮಗಳಲ್ಲಿ  ಮಳೆ ಸುರಿದು ಕೊಂಚ ತಂಪೆರೆಯಿತು.

ಗುರುವಾರ ಸಂಜೆ 6 ರಿಂದಲೇ ಮೋಡ ಕವಿದ ವಾತಾವರಣ ಇತ್ತು. 7.30 ರ ಸುಮಾರಿಗೆ ಗುಡುಗು-ಮಿಂಚಿನಿಂದ ಮಳೆ ಸುರಿಯಲಾರಂಭಿಸಿತು.

ಬಿರು ಬಿಸಿಲಿಗೆ ಭೂಮಿ ಕಾದಿದ್ದರಿಂದ ಮಳೆ ಸುರಿಯುತ್ತಿದ್ದರೂ ನೀರು ಭೂಮಿಯಲ್ಲೇ ಆವಿಯಾಗುತ್ತಿತ್ತು. ಭೂಮಿ ಹದ ಮಾಡಿಕೊಂಡಿದ್ದ ರೈತರು ಮಳೆಗಾಗಿ ಕಾದಿದ್ದರು. ಹೀಗೆ ಉತ್ತಮ ಮಳೆ ಸುರಿದರೆ ಮುಂಗಾರು ಬಿತ್ತನೆಗೆ ಅನುಕೂಲವಾಗಲಿದೆ ಎನ್ನುತ್ತಾರೆ ರೈತರು.

ಎರಡು ತಿಂಗಳಿಂದ ಬಿಸಿಲಿನ ಝಳ ಅನುಭವಿಸಿದ ಜನರಿಗೆ ಸುರಿದ ಮಳೆ ಅಲ್ಪಮಟ್ಟಿಗೆ ವಾತಾವರಣವನ್ನು ತಂಪೇರಿಸಿತು. ತಾಲೂಕಿನಲ್ಲಿ ಸಾಮಾನ್ಯವಾಗಿ 30ರಿಂದ 36ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಬಿಸಿಲಿನ ತಾಪ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸುಮಾರು 38ರಿಂದ 40ಡಿಗ್ರಿ ಸೆಲ್ಸಿಯಸ್‌ವರೆಗೆ ಬಿಸಿಲಿನ ತಾಪ ಕಂಡುಬಂದ ಪರಿಣಾಮ ಜನ ಜೀವನದ ಮೇಲೆ ಪರಿಣಾಮ ಬೀರುವಂತೆ ಮಾಡಿದೆ.

ಇದೀಗ ಸುರಿದ‌ ಮಳೆಯಿಂದ ಭೂಮಿಯಲ್ಲಿ‌ ಬಿಸಿಲಿನ‌ ಕಾವು ಹೆಚ್ಚಾಗಲಿದೆ. ಕನಿಷ್ಠ ವಾರದಲ್ಲಿ ಎರಡ್ಮೂರು ಭಾರಿಯಾದರು ಮಳೆ ಸುರಿದರೆ ಸ್ವಲ್ಪ‌ಮಟ್ಟಿಗೆ ತಣ್ಣಗಾಗಬಹುದು, ಆದರೆ ಮಳೆ ಬಾರದೇ ಸುಮ್ಮಾನದರೆ ಮತ್ತಷ್ಟು ಬಿಸಿಲಿನ ಝಳ ಹೆಚ್ಚಾಗುತ್ತದೆ. ಮೊದಲಿಗಿಂತ ಎರಡು ಪಟ್ಟು  ಬಿಸಿಲಿನ ತಾಪ ಶುರುವಾಗಲಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!