ಜಗಳೂರು:ಜಿಲ್ಲಾ ಪಂಚಾಯಿತಿಯ ನೌಕರ ಗೋವಿಂದರೆಡ್ಡಿ ನಿವೃತ್ತಿ

Suddivijaya
Suddivijaya June 30, 2022
Updated 2022/06/30 at 11:47 PM

ಸುದ್ದಿವಿಜಯ,ಜಗಳೂರು:ಜಿಲ್ಲಾ ಪಂಚಾಯಿತಿಯ ನೌಕರ ಗೋವಿಂದರೆಡ್ಡಿ ನಿವೃತ್ತಿ ಹಿನ್ನೆಲೆ ಗುರುವಾರ ಬೀಳ್ಕೋಡುಗೆ ಸಮಾರಂಭ ಆಯೋಜಿಸಲಾಗಿತ್ತು.

ಜಿ.ಪಂ ಎಇಇ ಪುಟ್ಟಸ್ವಾಮಿ ಮಾತನಾಡಿ, ಸರ್ಕಾರಿ ಕೆಲಸದಲ್ಲಿ ನಿವೃತ್ತಿ ಸಹಜ ಪ್ರಕ್ರಿಯೆ, ಆದರೆ ಇರುವ ಅವದಿಯಲ್ಲಿ ಉತ್ತಮ ಕೆಲಸ ಮಾಡಿ ಮಾದರಿಯಾಬೇಕು ಎಂದರು.

ಕೆಲಸದ ಒತ್ತಡದಲ್ಲಿ ಕುಟುಂಬದವರೊಂದಿಗೆ ಪ್ರೀತಿ ವಿಶ್ವಾಸ, ನೆಮ್ಮದಿಯಿಂದ ಕಾಲ ಕಳೆಯಲು ಸಾದ್ಯವಾಗುತ್ತಿಲ್ಲ. ನಿವೃತ್ತಿ ನಂತರವಾದರೂ ಆರೋಗ್ಯವಾಗಿ ಸಂತಸದಿಂದ ಜೀವನ ನಡೆಸಲಿ ಎಂದು ಶುಭ ಹಾರೈಸಿದರು.

ಇದುವರೆಗೂ ಕಚೇರಿಯಲ್ಲಿ ವೇತನ ಪಡೆಯುತ್ತಿದ್ದ ಗೋವಿಂದಪ್ಪ ನಿವೃತ್ತಿ ನಂತರ ಬರುವ ಪಿಂಚಣಿ ಇತರೆ ಸೌಲಭ್ಯಗಳನ್ನು ಅಲೆದಾಡಿಸದೇ ಕೆಲಸ ಮುಗಿಸಿಕೊಡಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ‌ ಇಂಜಿನಿಯರ್ ಗಳಾದ ಶಿವಮೂರ್ತಿ,ನಾಗರಾಜ್, ವ್ಯವಸ್ಥಾಪಕ ಲೋಹಿತ್, ದಾದಪೀರ್, ಅಬ್ದುಲ್ ಖಾದರ್ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!