ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಇಂದು ಅದ್ದೂರಿಯಾಗಿ ಪ್ರಚಾರ ಮಾಡಿ ಅನೇಕರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಭರಮಸಮುದ್ರ ಗ್ರಾಮದ ಮುಖಂಡರು ಬಿಜೆಪಿ, ಪಕ್ಷೇತರ ಬೆಂಬಲ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮಡ್ರಳ್ಳಿ, ಸಿದ್ದಯ್ಯನ ಕೋಟೆ, ಬಸವನಕೋಟೆ, ಅಗಸನಹಳ್ಳಿ, ಮಾಗಡಿ, ಗುರುಸಿದ್ದಾಪುರ, ವೆಂಕಟೇಶಪುರ, ಗೌಡಿಕಟ್ಟೆ,
ಮಲೆಮಾಚಿಕೆರೆ, ಅಸಗೋಡು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿದರು. ಇತ್ತ ದೇವೇಂದ್ರಪ್ಪ ಅವರ ಪುತ್ರ ಕೀರ್ತಿಕುಮಾರ್ ಹಾಲೇಕಲ್ಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿದರು.
ಈ ವೇಳೆ ಮಾತನಾಡಿದ ದೇವೇಂದ್ರಪ್ಪ, ಕಾಂಗ್ರೆಸ್ ಪಕ್ಷ ಬಡವರ ಪಕ್ಷ. ಹಿಂದುಳಿದವರ ಪಕ್ಷ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿದೆ. ಕಾಂಗ್ರೆಸ್ ಬಂದರೆ ಕ್ಷೇತ್ರದ ಅಭಿವೃದ್ಧಿಯಾಗಲಿದೆ. 57 ಕೆರೆ ತುಂಬಿಸುವ ಯೋಜನೆ ಪೂರ್ಣಮಾಡುತ್ತೇವೆ. ಬಡವರ ಕಣ್ಣಲ್ಲಿ ಬೆಲೆ ಏರಿಕೆಯ ನೀರು ತರಿಸಿದ ಬಿಜೆಪಿಗೆ ಮತಹಾಕಬೇಡಿ ಎಂದು ಮನವಿ ಮಾಡಿದರು.