ಆ.24ಕ್ಕೆ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆ

Suddivijaya
Suddivijaya August 21, 2024
Updated 2024/08/21 at 10:03 AM

suddivijayanews21/08/2024

ಸುದ್ದಿವಿಜಯ, ಜಗಳೂರು: ಪಟ್ಟಣದ ಗುರುಭವನದಲ್ಲಿ ಆ.24 ಶನಿವಾರ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದಿಂದ 2024-25ನೇ ಸಾಲಿನ ವಾರ್ಷಿಕ ಸಭೆ ಹಾಗೂ ಶಾಸಕರಿಂದ ಕುಟುಂಬ ಪಿಂಚಣಿದಾರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಎ.ಪಾಲಯ್ಯ ತಿಳಿಸಿದರು.

ಪಟ್ಟಣದ ಓಂಕಾರೇಶ್ವರ ಬಡಾವಣೆಯ ಪತ್ರಿಕಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೃತ್ತ ನೌಕರರ ಸಂಘವು ಉತ್ತಮವಾಗಿ ಬೆಳೆಯುತ್ತಿದ್ದು ಸಾಮಾಜಿಕ ಸೇವೆ ಮಾಡಲಾಗುತ್ತಿದೆ.

ಕಳೆದ ಒಂದು ವರ್ಷದಿಂದ ಸಂಘದಲ್ಲಾದ ಚಟುವಟಿಕೆಗಳ ಬಗ್ಗೆ ವಾರ್ಷಿಕ ಸಭೆಯಲ್ಲಿ ಹಿಂದಿನ ಸಭೆ ನಡಾವಳಿಕೆ ಮಂಡನೆ ಹಾಗೂ ಅನುಮೋದನೆ ಮಾಡಲಾಗುತ್ತಿದೆ. 75 ವರ್ಷ ಪೂರ್ಣಗೊಂಡ ನಿವೃತ್ತ ನೌಕರರಿಗೆ, ಕುಟುಂಬ ಪಿಂಚಣಿದಾರರಿಗೆ ಗೌರವಿಸಲಾಗುದು ಎಂದರು.

ಕಾರ್ಯಕ್ರಮವನ್ನು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಉದ್ಘಾಟಿಸಲಿದ್ದಾರೆ. ಸಂಘದ ತಾಲೂಕಾಧ್ಯಕ್ಷ ಎ. ಪಾಲಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಬೆ.ಕ.ಸ..ನಿ.ನೌ. ಸಂಘದ ಉಪಾಧ್ಯಕ್ಷ ಗುರುಮೂರ್ತಿ,

 ಜಗಳೂರು ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ನಿವೃತ್ತ ಸರಕಾರಿ ನೌಕರರಿಂದ ಪತ್ರಿಕಾಗೋಷ್ಠಿ ನಡೆಯಿತು.
 ಜಗಳೂರು ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ನಿವೃತ್ತ ಸರಕಾರಿ ನೌಕರರಿಂದ ಪತ್ರಿಕಾಗೋಷ್ಠಿ ನಡೆಯಿತು.

ಸ.ನೌ ಸಂಘದ ತಾಲೂಕಾಧ್ಯಕ್ಷ ಸಿ.ಬಿ ನಾಗರಾಜ್, ಪ್ರಾ. ಶಾ. ಶಿ ಸಂಘದ ಅಧ್ಯಕ್ಷ ಬಿ.ಎಂ ಹನುಮಂತೇಶ್ ಸೇರಿದಂತೆ ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಎಲ್ಲ ನಿವೃತ್ತ ನೌಕರರು, ಪಿಂಚಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ.ರಾ.ಸ.ನಿ.ನೌ ಸಂಘದ ಪ್ರ. ಕಾರ್ಯದರ್ಶಿ ಕೃಷ್ಣಪ್ಪ, ಉಪಾಧ್ಯಕ್ಷ ಜನಾಬ್ ನಜೀರ್ ಅಹಮದ್, ರಾಜ್ಯ ಪರಿಷತ್ ಸದ್ಸಸ್ಯ ಟಿ.ಕೆ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಎಂ. ಹುಚ್ಚಲಿಂಗಯ್ಯ,

ಸಹಕಾರ್ಯದರ್ಶಿ ಎಂ.ಎಸ್ ಪಾಟೀಲ್, ನಿ.ಮುಖ್ಯ ಶಿಕ್ಷಕ ಎಂ.ಡಿ ಆಂಜನೇಯ, ಪದಾಧಿಕಾರಿಗಳಾದ ರುದ್ರಪ್ಪ, ಎಸ್.ಚಂದ್ರಪ್ಪ, ಶರಣಪ್ಪ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!