ಡಿವೈಡರ್ ಗೆ ಗುದ್ದಿದ ಬೈಕ್ ಸವಾರ ಸ್ಥಳದಲ್ಲೇ ಸಾವು!

Suddivijaya
Suddivijaya June 5, 2022
Updated 2022/06/05 at 2:21 PM


 

 

ಅಪಘಾತಕ್ಕೆ ಅತಿವೇಗವೇ ಕಾರಣ

ರಸ್ತೆಯ ವಿಭಜಕ ಯಮಸ್ವರೂಪಿ ಆಯ್ತು
ಕ್ಷಣಾರ್ಧದಲ್ಲೇ ಬೈಕ್ ಸವಾರನ ಹಾರಿ ಹೋಯ್ತು ಪ್ರಾಣಪಕ್ಷಿ

ಸುದ್ದಿ ವಿಜಯ, ಜಗಳೂರು:ಪಟ್ಟಣದ ಬಿದರಕೆರೆ ರಸ್ತೆಯಲ್ಲಿ ಭಾನುವಾರ ಬೈಕ್‍ವೊಂದು ಡಿವೈಡರ್ ಡಿಕ್ಕಿ ಹೊಡೆದು ಓರ್ವ ಯುವಕ ಸಾವನ್ನಪ್ಪಿದ್ದು, ಮತ್ತೋರ್ವ ಯುವಕ ಗಾಯಗೊಂಡಿದ್ದಾನೆ.

ಚಿಕ್ಕಮ್ಮನಹಟ್ಟಿ ಗೊಲ್ಲರಹಟ್ಟಿಯ ಲೋಕಪ್ಪ ಇವರ ಪುತ್ರ ದರ್ಶನ (18) ಮೃತ ಯುವಕ, ಉದ್ದಗಟ್ಟ ಗ್ರಾಮದ ಆಕಾಶ್ ಗಾಯಗೊಂಡಿದ್ದಾನೆ. ಮದ್ಯಾಹ್ನ ಸ್ನೇಹಿತರಿಬ್ಬರು ಬೈಕ್ ಏರಿ ಜಗಳೂರಿನಿಂದ ತೋರಣಗಟ್ಟೆ ಕಡೆ ಪಯಣ ಹೊರಟಿದ್ದರು.

ಬಿದರಕೆರೆ ರಸ್ತೆ ಲೋಕೇಶ್‍ರೆಡ್ಡಿ ಬಡಾವಣೆ ಸಮೀಪ ಹೋಗುವಾಗ ಕಾರು ತಪ್ಪಿಸಲು ಅವಸರದಲ್ಲಿ ರಸ್ತೆ ಪಕ್ಕದ ಡಿವೈಡರ್‍ಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಇವರನ್ನು ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದಲ್ಲಿ ದರ್ಶನ ಕೊನೆಯುಸಿರೆಳೆದಿದ್ದಾನೆ. ಆಕಾಶ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

 

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!