ಜಗಳೂರು:ವಿವಿಧ ಯೋಜನೆಗಳಿಗೆ ತೋಟಗಾರಿಕೆ ಮಿಷನ್ ಅಡಿ ಅರ್ಜಿ ಆಹ್ವಾನ

Suddivijaya
Suddivijaya June 21, 2024
Updated 2024/06/21 at 12:27 PM

suddivijayanews21/06/2024

ಸುದ್ದಿವಿಜಯ, ಜಗಳೂರು: ತಾಲೂಕು ಹಿರಿಯ ತೋಟಗಾರಿಕಾ ನಿರ್ದೇಶಕರು ಮತ್ತು ಜಿಪಂ ವತಿಯಿಂದ 2024-25ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿ

ವಿವಿಧ ಮೂಲಸೌಕರ್ಯ ಅಭಿವೃದ್ಧಿ ಘಟಕಗಳಾದ ನೀರು ಸಂಗ್ರಹಣಾ ಘಟಕಗಳಾದ ಕೃಷಿಹೊಂಡ, ಸಮುದಾಯ ಕೃಷಿಹೊಂಡ ಕೊಯ್ಲೋತ್ತರ ಸಂಸ್ಕರಣಾ ಘಟಕ ಹಾಗೂ ಇತರೆ ಕಾರ್ಯಕ್ರಮಗಳ ಅನುಷ್ಟಾನಗೊಳಿಸಲಾಗಿದೆ ಎಂದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಡಿ.ಎಸ್.ಪ್ರಭುಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ರೈತರು ಇದರ ಸೌಲಭ್ಯ ಪಡೆಯಲು ತೋಟಗಾರಿಕೆ ಇಲಾಖೆ ಜಗಳೂರುನಲ್ಲಿ ತಮ್ಮ ಹೆಸರು ನೋಂದಾಯಿಸಬಹುದು. ಅರ್ಜಿ ಸಲ್ಲಿಸಲು ಜುಲೈ, 8,2024 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಹೋಬಳಿ ಮಟ್ಟದ ಅಧಿಕಾರಿಗಳ ಮೊಬೈಲ್ ಸಂಖ್ಯೆ ಕಸಬ ಹೋಬಳಿಯ ಜಿ.ಎಚ್.ಪ್ರಸನ್ನ ಕುಮಾರ್ (9108338179), ಬಿಳಿಚೋಡು ಹೋಬಳಿಯ ವೆಂಕಟೇಶ್ ನಾಯ್ಕ್ (8904721145) ಮತ್ತು ಸೊಕ್ಕೆ ಹೋಬಳಿಯ ಎಚ್.ಟಿ.ಸುನೀಲ್‍ಕುಮಾರ್ (7899942287) ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!