Breaking News: ಗುತ್ತಿಗೆದಾರನ ಮಗನ ಕುತ್ತಿಗೆ ಕೊಯ್ದ ದುಷ್ಕರ್ಮಿಗಳು !!

Suddivijaya
Suddivijaya December 5, 2022
Updated 2022/12/05 at 8:15 AM

ಜಗಳೂರು: ತನ್ನ ಮನೆ ಹೊರಭಾಗದಲ್ಲಿ ಸ್ನಾನ ಮಾಡುತ್ತಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯ ಕುತ್ತಿಗೆ ಕೊಯ್ದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಜಗಳೂರು ತಾಲೂಕು ಗೌರಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಗ್ರಾಮದ ಗುತ್ತಿಗೆದಾರ ವೀರಭದ್ರಪ್ಪ ಇವರ ಪುತ್ರ ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶಾಲೆಯಿಂದ ಪ್ರವಾಸ ಹೊರಟ್ಟಿದ್ದರಿಂದ ಮಂಜುನಾಥನಿಗೆ ತಾಯಿ‌ ಸ್ನಾನ ಮಾಡಿಸಿ ಒಳಗೆ ಹೋಗಿದ್ದಾರೆ.‌ಅಷ್ಟರಲ್ಲಿಯೇ ಮುಸುಕು‌ ಧರಿಸಿದ ಇಬ್ಬರು ದುಷ್ಕರ್ಮಿಗಳು ಬಂದು ಚಾಕುವಿನಿಂದ ಕುತ್ತಿಗೆ ಕೊಯ್ದು ಪಕ್ಕದಲ್ಲಿದ್ದ ಹೊಸ ಸಿಂಟೆಕ್ಸ್ ನಲ್ಲಿ ಹಾಕಿ ಪರಾರಿಯಾಗಿದ್ದಾರೆ.

ಹೊರಗಡೆ ಬಂದ ತಾಯಿ‌ ಮಗನಿಲ್ಲದಿರುವುದು ಕಂಡು ಹುಡುಕಾಡಿದ್ದಾಳೆ. ಬಿದ್ದಿದ್ದ ರಕ್ತ ಕಂಡು ಗಾಬರಿಗೊಂಡಿದ್ದಾರೆ. ಸಿಂಟೆಕ್ಸ್ ನಲ್ಲಿ ಮಗ ಒದ್ದಾಡುತ್ತಿದ್ದ ಶಬ್ದ ಕೇಳಿ ಹೋಗಿ ನೋಡಿದರೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಅದೇ ಸಮಯಕ್ಕೆ ತಂದೆ ವೀರಭದ್ರಪ್ಪ ಬಂದಿದ್ದು ತಕ್ಷಣವೇ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳಿಸಲಾಗಿದೆ.

ಆದರೆ ಈ ಕೃತ್ಯಕ್ಕೆ ಕಾರಣ ಏನು ಎಂಬುವುದು ಮಾಹಿತಿ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಗೆ ಬಲೆ ಬೀಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!