ಕೂದಲೆಳೆ ಅಂತರದಿಂದ ತಪ್ಪಿದ ಭಾರಿ ಅನಾಹುತ, ಬದುಕುಳಿದ ಪ್ರಯಾಣಿಕರು!

Suddivijaya
Suddivijaya July 23, 2023
Updated 2023/07/23 at 7:12 AM

ಸುದ್ದಿವಿಜಯ, ದಾವಣಗೆರೆ: ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೊಡಗನೂರು ಬಳಿ ಬಸ್ ಮತ್ತು ಬೊಲೆರೊ ಮಧ್ಯೆ ಅಪಘಾತ ಸಂಭಬಿಸಿದೆ.

ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೊಗನೂರು ಕೆರೆ ಏರಿಯ ಮೇಲೆ ಬಸ್ ಬರುತ್ತಿರುವಾಗ ಎದುರಿಗೆ ಬಂದ ಬೊಲೆರೋ ವೇಗವಾಗಿ ಬಸ್ ಡಿಯಾಗಬೇಕಿತ್ತು.

ತಕ್ಷಣ ಬಸ್ ಚಾಲಕ ಬಸ್ ಅನ್ನು ಎಡಕ್ಕೆ ತಿರುಗಿಸಿದ್ದರಿಂದ ಕೆರೆಗೆ ಕಟ್ಟಲಗಿದ್ದ ಕಲ್ಲು ಹಾಸಿನ ಮೇಲೆ ಹೋಗಿ ಕಲ್ಲುಗಳು ಅಡ್ಡ ಸಿಕ್ಕಿ ಕೊಂಡ ಪರಿಣಾಮ ಬಸ್ ನಿಂತಿದೆ.

ಇಲ್ಲವಾಗಿದ್ದಲ್ಲಿ ನೀರಿನಲ್ಲಿ ಬಸ್ ಮುಳುಗಿ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಡುವ ಸಂಭವವಿತ್ತು.

ಕೂದಲೆಳೆ ಅಂತರದಿಂದ ಈ ಅನಾಹುತ ತಪ್ಪಿದ್ದು ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಸ್ಥಳಕ್ಕೆ ಮಾಯಕೊಂಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೊಲೆರೊ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮಾಹಿತಿ ತಿಳಿದು ಬಂದಿಲ್ಲ.

Share this Article
Leave a comment

Leave a Reply

Your email address will not be published. Required fields are marked *

error: Content is protected !!