ದಾವಣಗೆರೆ:ಸರ್ಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ

Suddivijaya
Suddivijaya April 26, 2023
Updated 2023/04/26 at 1:52 PM

suddivijaya/kannadanews/26/04/2023

ಸುದ್ದಿವಿಜಯ, ದಾವಣಗೆರೆ: ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ದಾವಣಗೆರೆ ಶಾಖೆಯ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ದೊಡ್ಡಬಾತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ|| ಎಸ್.ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸಂಘಕ್ಕೆ ವಿವಿಧ ಪದಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಲಾಗಿದೆ.

ಕಾರ್ಯದರ್ಶಿಯಾಗಿ ಡಾ ರಾಘವೇಂದ್ರ, ಖಜಾಂಚಿ ಡಾ.ನಾಗರಾಜ ಜೆ.ಎಸ್. ಉಪಾಧ್ಯಕ್ಷರಾಗಿ .ಡಾ.ಗೀತಾ ಡಿ.ಎಚ್, .ಡಾ ಸುದೀಪ್ ಕುಮಾರ್ ಎಚ್.ಸಿ, ಸಂಘಟನಾ ಕಾರ್ಯದರ್ಶಿಯಾಗಿ ಡಾ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿಯಾಗಿ ಡಾ.ಶ್ರೀನಿವಾಸ್ ಎನ್.ಎಸ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಡಾ.ಗಿರೀಶ್, ರಾಜ್ಯ ಪ್ರತಿನಿಧಿಯಾಗಿ ಡಾ.ರುದ್ರೇಶ ಎಸ್, ಡಾ.ಗಿರೀಶ್, ದಂತ ವೈದ್ಯಕೀಯ ಪ್ರತಿನಿಧಿಯಾಗಿ ಡಾ.ಸಿದ್ದರಾಮೇಶ್ವರ ಟಿ.ಎಸ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸದಸ್ಯರಾಗಿ ಡಾ.ಆಶಾ ಬಾನುಪ್ರಕಾಶ್, ಡಾ. ಬಸವಂತ್ ಜಿ.ಎಂ,ಡಾ. ಶಿವಪ್ರಕಾಶ್ ಎಂ, ಡಾ. ಶಿಲ್ಪಾ ನಾಯಕ್, ಡಾ.ಚಂದ್ರಪ್ಪ ಜಿ.ಬಿ, ಡಾ.ಪ್ರಭು ಬಿ.ಜಿ, ಡಾ .ಬಸವರಾಜ್ ಎಸ್.ಸಿ ಮತ್ತು ತಾಲ್ಲೂಕು ಪ್ರತಿನಿಧಿಗಳಾಗಿ ಡಾ. ವಿಶಾಲ್ ಜೆ, ಡಾ.ನರೇಂದ್ರ ಎಚ್. ಜೆ, ಡಾ. ರಾಘವೇಂದ್ರ ಬಿ.ಸಿ,ಡಾ.ಲೋಹಿತಾಶ್ವ ಎಚ್. ಟಿ, ಡಾ. ಕಾರ್ತಿಕ್ ಸಿ .ಎಸ್ ಆಯ್ಕೆಯಾಗಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!