ಭರಮಸಮುದ್ರ ಕ್ರಾಸ್ ಬಳಿ ಭೀಕರ ಅಪಘಾತ ಮೂವರ ಸ್ಥಿತಿ ಗಂಭೀರ!

Suddivijaya
Suddivijaya December 28, 2022
Updated 2022/12/28 at 4:52 PM

ಸುದ್ದಿವಿಜಯ,ಜಗಳೂರು: ತಾಲೂಕಿನ ಭರಮಸಮುದ್ರ ಕ್ರಾಸ್ ಬಳಿ ಬುಧವಾರ ಸಂಜೆ 8 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಜಗಳೂರಿನಿಂದ ಭಮಸಮುದ್ರ ಮಾರ್ಗವಾಗಿ ಕಲ್ಲೇದೇವರ ಪುರಕ್ಕೆ ಹೋಗುವಾಗ ಭರಮಸಮುದ್ರ ಕ್ರಾಸ್ ನಿಂದ ನುಗ್ಗಿದ ಅಪೇ ಆಟೋ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ನಾಲ್ವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು ಜಗಳೂರು ಸಾರ್ವಜನಿಕ ಆಸ್ಪತ್ರೆಯಿಂದ ದಾವಣಗೆರೆ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಸಾಗಿಸಲಾಯಿತು.

ಗಂಭೀರವಾಗಿ ಗಾಯಗೊಂಡವರನ್ನು ಚಿತ್ರದುರ್ಗ ತಾಲೂಕಿನ ಹುಲ್ಕೇಹಾಳ್ ಗ್ರಾಮದ ಭರತ್(25),ಮುದ್ದಾಪುರ ಗ್ರಾಮದ ಮಧು(26),ಕಲ್ಲೇದೇವರಪುರದ ಕಲ್ಲೇಶ್(32),  ಕೂಡ್ಲಿಗಿ ತಾಲೂಕಿನ ಲೋಕಿಕೆರೆ ಗ್ರಾಮದ   ಕೊಲ್ಲಪ್ಪ (43)ಎಂದು ತಿಳಿದು ಬಂದಿದೆ.

ಅಪಘಾತದಿಂದಾಗಿ ಕೈಕಾಲು, ತಲೆಗೆ ಬಲವಾದ ಏಟು ಬಿದ್ದಿದ್ದು ಪ್ರಥಮ ಚಿಕಿತ್ಸೆ ಕೊಡಿಸಿ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಯಿತು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!