ಮನೆಯ ಕಾಂಪೌಂಡ್‍ನಲ್ಲಿಟ್ಟಿದ್ದ ಸಿಲಿಂಡರ್‍ಗಳನ್ನು ಎಗರಿಸಿದ ಕಳ್ಳರು!

Suddivijaya
Suddivijaya March 31, 2023
Updated 2023/03/31 at 12:39 PM

ಸುದ್ದಿವಿಜಯ, ದಾಣವಣಗೆರೆ: ಅಯ್ಯೋ ನಮ್ಮನೆ ಮುಂದೆ ಯಾರು ಏನೂ ಕಳ್ಳತನ ಮಾಡಲ್ಲ. ಯಾಕಂದ್ರೆ ನಾವು ಸದಾ ಇಲ್ಲೇ ಇರ್ತಿವಿ. ಕಾಂಪೌಂಡ್ ಬೇರೆಯಿದೆ ಎಂದು ಬೇಜವಾಬ್ದಾರಿ ತೋರಿ ಎರಡು ತುಂಬಿದ್ದ ಮತ್ತು ಒಂದು ಖಾಲಿಯಾಗಿದ್ದ ಸಿಲಿಂಡರ್‍ಗಳನ್ನು ಹೊರಗೆ ಇರಿಸಲಾಗಿತ್ತು.

ಅದರ ಮೇಲೆ ಕಣ್ಣಿಟ್ಟ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯ 4ನೇ ಕ್ರಾಸ್‍ನಲ್ಲಿ ಮನೆಯ ಕಾಂಪೌಂಡ್‍ನ ಒಳಗಿದ್ದ ಅಡುಗೆ ಅನಿಲ ತುಂಬಿದ್ದ ಎರಡು ಸಿಲಿಂಡರ್ ಹಾಗೂ ಒಂದು ಖಾಲಿ ಸಿಲಿಂಡರ್ ಅನ್ನು ಕಳ್ಳರು ಕದ್ದಿದ್ದಾರೆ.

ಬಡಾವಣೆಯ ಶಿವಶಂಕರ ಪಟೇಲ್ ಅವರ ಮನೆಯ ಹೊರಗೆ ಸಿಲಿಂಡರ್ ಅಳವಡಿಸಿದ್ದು, ಪೈಪ್ ಮೂಲಕ ಒಳಗೆ ಸಂಪರ್ಕ ಕಲ್ಪಿಸಿದ್ದರು. ಬುಧವಾರ ಬೆಳಿಗ್ಗೆ ಅವರ ಪತ್ನಿ ಅಡುಗೆ ಮಾಡಲು ಹೋದಾಗ ಗ್ಯಾಸ್ ಬರದಿದ್ದಾಗ ಅನುಮಾನಗೊಂಡು ಹೊರಗೆ ಬಂದು ನೋಡಿದಾಗ ಸಿಲಿಂಡರ್‍ಗಳು ಕಳವಾಗಿದ್ದು ಗೊತ್ತಾಗಿದೆ. ಕೆ.ಟಿ.ಜೆ. ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುತ್ತಮುತ್ತ ಮನೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಪರಿಶೀಲನೆ ಮಾಡ್ತಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!