ಜಗಳೂರು: ಇಂದಿನಿಂದ ಮೂರುದಿನ ಹೊನಲು ಬೆಳಕಿನ ‘ಜಿ.ಎಂ.ಸಿದ್ದೇಶ್ವರ್’ ಕಪ್ ಕಬಡ್ಡಿ!

Suddivijaya
Suddivijaya January 16, 2023
Updated 2023/01/16 at 1:49 AM

ಸುದ್ದಿವಿಜಯ, ಜಗಳೂರು: ಪಟ್ಟಣದ ಬಯಲು ರಂಗಮಂದಿರದಲ್ಲಿ ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ಹೊನಲು ಬೆಳಕಿನ ಜಿ.ಎಂ.ಸಿದ್ದೇಶ್ವರ್ ಕಪ್ ಕಬಡ್ಡಿ ಕ್ರೀಡಾಕೂಟ ನಡೆಯಲಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಬಯಲು ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿರುವ ಕಬಡ್ಡಿ ಪೂರ್ವ ತಯಾರಿ ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್‍ವಿಆರ್ ಅಭಿಮಾನಿ ಬಳಗ ಹಾಗೂ ಕರ್ನಾಟಕ ಅಮೇಚೂರ್ ಕಬ್ಬಡ್ಡಿ ಅಸೋಷಿಯೇಷನ್ ಸಹಯೋಗದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಕಪ್ ಹೆಸರಿನಡಿ ಜ.16,17 ಮತ್ತು 18 ಮೂರು ದಿನಗಳ ಕಾಲ ಹೊನಲುಬೆಳಕಿನ ಕಬಡ್ಡಿ ಮ್ಯಾಟ್ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯದ 28 ಜಿಲ್ಲೆಗಳಿಂದ 30 ಪುರುಷ ಹಾಗೂ 24 ಮಹಿಳಾ ತಂಡಗಳು ಭಾಗವಹಿಸಲಿದ್ದು.800 ಕ್ರೀಡಾಪಟುಗಳಿಗೆ ಸಾರಿಗೆ ವೆಚ್ಚ, ಸಮವಸ್ತ್ರ ಹಂಚಲಾಗಿದೆ. ಪಟ್ಟಣದ ಹಾಸ್ಟೆಲ್‍ಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ ಊಟ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. 9 ಸಾವಿರ ಪ್ರೇಕ್ಷಕರಿಗೆ ಗ್ಯಾಲರಿ ನಿರ್ಮಸಿ ಹಾಸನದ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅಂತರ್ ರಾಜ್ಯಮಟ್ಟದ ಮಹಿಳಾ ಮತ್ತು ಪುರುಷ ತಂಡಗಳನ್ನು ಆಯ್ಕೆಗೊಳಿಸಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡೆಯಲ್ಲಿ ಪ್ರತಿನಿಧಿಸಲಾಗುವುದು ಈ ಪಂದ್ಯಾವಳಿಯನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

 ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಇಂದಿನಿಂದ ನಡೆಯಲಿರುವ ರಾಜ್ಯಮಟ್ಟದ ಕಬಡ್ಡಿ ಕ್ರೀಟಾಕೂಟದ ತಯಾರಿಯನ್ನು ಶಾಸಕ ಎಸ್.ವಿ.ರಾಮಚಂದ್ರ ವೀಕ್ಷಿಸಿದರು.
 ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಇಂದಿನಿಂದ ನಡೆಯಲಿರುವ ರಾಜ್ಯಮಟ್ಟದ ಕಬಡ್ಡಿ ಕ್ರೀಟಾಕೂಟದ ತಯಾರಿಯನ್ನು ಶಾಸಕ ಎಸ್.ವಿ.ರಾಮಚಂದ್ರ ವೀಕ್ಷಿಸಿದರು.

ಕಬ್ಬಡ್ಡಿ ಅಸೋಷಿಯೇಷನ್ ಲಕ್ಷ್ಮಣ ಮಾತನಾಡಿ, ಜಗಳೂರಿನಲ್ಲಿ ಕರ್ನಾಟಕ ಚಾಂಪಿಯನ್ ಶಿಪ್ ನಡೆಸಲಾಗುತ್ತಿದೆ.ಪ್ರತಿನಿತ್ಯ ಬೆಳಿಗ್ಗೆ 9 ರಿಂದ ರಾತ್ರಿ 11 ಗಂಟೆವರೆಗೆ 16 ಪಂದ್ಯಗಳು ನಡೆಯಲಿವೆ. ಲೀಗ್ ಕಮ್ ನಾಕ್ ಔಟ್ ಪಂದ್ಯಗಳಾಗಿರುತ್ತವೆ. ಪ್ರಥಮ ಸ್ಥಾನಕ್ಕೆ 1.5 ಲಕ್ಷ ರೂ., ದ್ವಿತೀಯ ಒಂದು ಲಕ್ಷ ರೂ. ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ತಲಾ 50000 ನಗದು ಬಹುಮಾನ ಪ್ರಶಸ್ತಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಪಂದ್ಯಾವಳಿ ವೀಕ್ಷಕರಾಗಿ ಅಂತರಾಜ್ಯ ಪೆÇ್ರೀ ಕಬಡ್ಡಿ ಕ್ರೀಡಾಪಟುಗಳಾದ ಸುಕೇಶ್ ಹೆಗ್ಡೆ ,ಬೆಂಗಳೂರು ಬುಲ್ಸ್ ಪ್ರಕಾಶ್ ರೈ, ತುಮಕೂರು ಧನರಾಜ್, ಡಿ.ಸಿರಮೇಶ್, ರಾಕೇಶ್ ಮಲ್ಲಿ, ಹನುಮಂತೇಗೌಡ್ರು, ರಾಜ್ಯಮಟ್ಟದ ಕಬಡ್ಡಿ ಆಟಗಾರರು ಭಾಗವಹಿಸಲಿದ್ದಾರೆ ಎಂದರು.

ಪಿಐ ಶ್ರೀನಿವಾಸ್ ಮಾತನಾಡಿ, ಕ್ರೀಡಾಂಗಣ ಹಾಗೂ ಕ್ರೀಡಾಪಟುಗಳಿಗೆ ಸೂಕ್ತ ಭದ್ರತೆಗಾಗಿ ಹೊರಗಡೆಯಿಂದ 60 ಜನ ಪೆÇಲೀಸ್ ಸಿಬ್ಬಂದಿಗಳನ್ನು ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದಂತೆ ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ವಿಎಸ್ ಎಸ್ ಎನ್ ಅಧ್ಯಕ್ಷ ಬಿಸ್ತುವಳ್ಳಿಬಾಬು,ವಕೀಲ ಡಿ.ಶ್ರೀನಿವಾಸ್,ಪ.ಪಂ ನಾಮನಿರ್ದೇಶಿತ ಸದಸ್ಯ ಬಿ.ಪಿ.ಸುಬಾನ್,ಮುಖಂಡರಾದ ಹನುಮಂತಪ್ಪ,ಓಬಳೇಶ್,ಮಂಜುನಾಥ್,ಅಣಜಿಗೆರೆ ಟಿ.ಮಲ್ಲಿಕಾರ್ಜುನ್,ಬಾಲೇನಹಳ್ಳಿ ಕೆಂಚನಗೌಡ ಸೇರಿದಂತೆ ಇದ್ದರು.

ಶಾಸಕ ಎಸ್.ವಿ.ರಾಮಚಂದ್ರ ಅವರ ಹುಟ್ಟು

ಪ್ರ್ರತಿವರ್ಷ ದಾವಣಗೆರೆಯಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿತ್ತು.ಶಾಸಕರು ಕ್ಷೇತ್ರದ ಜನತೆಗೆ ನೀಡಿದ ವಚನದಂತೆ ಬಹುದಿನದ ಕನಸ್ಸು ಅಭಿಮಾನಿ ಬಳಗದಿಂದ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.

ಬೆಳಿಗ್ಗೆ 11 ಗಂಟೆಗೆ ಗಂಧರ್ವ ಇವೆಂಟ್ಸ್ ನಿಂದ ರಸಮಂಜರಿ, ನಂತರ ಸಂಜೆ 4ಗಂಟೆಗೆ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ ಕ್ರೀಡಾಭಿಮಾನಿಗಳು,ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲಾಗುವುದು ಎಂದು ಕರೆ ನೀಡಿದರು.
-ಎಚ್.ಸಿ. ಮಹೇಶ್, ಬಿಜೆಪಿ ಮಂಡಲ ಅಧ್ಯಕ್ಷ

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!