ಜಗಳೂರು: ಹಿರೇಮಲ್ಲನಹೊಳೆಯಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಸಾಮಾನ್ಯ ಸಭೆಯಲ್ಲಿ ತೀರ್ಮಾನ

Suddivijaya
Suddivijaya January 23, 2023
Updated 2023/01/23 at 2:39 PM

ಸುದ್ದಿವಿಜಯ, ಜಗಳೂರು. ಚಿಕ್ಕಮಲ್ಲನಹೊಳೆ ಮತ್ತು ಹಿರೇಮಲ್ಲನಹೊಳೆ ಗ್ರಾಮಗಳಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗವುದು ಎಂದು ಗ್ರಾ.ಪಂ ಅಧ್ಯಕ್ಷೆ ಶಿವರುದ್ರಮ್ಮ ಹೇಳಿದರು.

ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರಿಕ್ಷೆಗೆ ಪೂರಕವಾಗುವಂತೆ ಅಗತ್ಯ ಸಲಕರಣೆಗಳನ್ನ ಒದಗಿಸಲಾಗುವುದು. ಸರ್ವ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈಗ ಬೇಸಿಗೆ ಆರಂಭವಾಗಲಿದ್ದು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ತೀರಾ ತುರ್ತಾಗಿ ನೀರಿನ ಸಮಸ್ಯೆ ಇರುವ ಕಡೆ ಸಭೆಯಲ್ಲಿ ಚರ್ಚಿಸಿ ಯಾವುದಾದರೂ ಮೂಲಕವಾಗಿ ನೀರು ಪೂರೈಕೆ ಮಾಡಬೇಕು. ಜನರು ಸಿಟ್ಟೆಗೆ ಹೇಳುವ ಮುನ್ನವೇ ಎಚ್ಚರಿಕೆ ವಹಿಸಬೇಕು ಎಂದು ಪಿಡಿಒಗೆ ಸೂಚನೆ ನೀಡಿದರು.

ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಓಬಣ್ಣ ಮಾತನಾಡಿ, ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸದಸ್ಯರಿಗೆ ಅಗತ್ಯ ಮಾಹಿತಿ ಒದಗಿಸುವುದು ಸ್ಥಳೀಯ ಸಿಬ್ಬಂದ್ದಿಗಳ ಕರ್ತವ್ಯವಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾಗುವ ಅನುದಾನವನ್ನು ಮೋಬೈಲ್ ನಲ್ಲಿ ಗ್ರಾ.ಪಂ. ಆಪ್ ಮೂಲಕ ಗಮನಿಸಬಹುದು. ಅನುದಾನ ದುರ್ಬಳಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.

 ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ರಾ.ಪಂ ಅಧ್ಯಕ್ಷೆ ಶಿವರುದ್ರಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು
 ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ರಾ.ಪಂ ಅಧ್ಯಕ್ಷೆ ಶಿವರುದ್ರಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು

15 ನೇ ಹಣಕಾಸು ಯೋಜನೆಯಡಿ 22 ಲಕ್ಷ ಅನುದಾನ ಲಭ್ಯವಿದ್ದು ಸದಸ್ಯರ ಸಲಹೆ ಸೂಚನೆಯಂತೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅನುಮೋದನೆ ಗೊಂಡ ನಂತರ ನಿಯಮನುಸಾರ ಅನುದಾನ ಬಳಸಿಕೊಂಡು ವಿವಿದ ಗ್ರಾಮಗಳ ಮೂಲಭೂತ ಸೌಲಭ್ಯ, ಪರಿಶಿಷ್ಠ ಜಾತಿ ಪರಿಶಿಷ್ಟ ಪಂಗಡ, ಹಾಗು ವಿಶೇಷ ಚೇತನ, ಕಲ್ಯಾಣ ಅಬಿವೃದ್ದಿಗೆ ಹಣ ವಿನಿಯೋಗಿಸಲಾಗುವುದು ಎಂದರು.

ನರೇಗಾ ಯೋಜನೆಯಡಿ ಈಗಾಗಲೇ ಹಲವು ಗ್ರಾಮಗಳಲ್ಲಿ ಕೆರೆ ಚೆಕ್ ಡ್ಯಾಂ, ಹೂಳೆತ್ತುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನು ಶೌಚಾಲಯ, ಶಾಲಾ ತಡೆಗೋಡೆ ಆಟದ ಮೈದಾನ, ಸಾಮೂಹಿಕ ಶೌಚಗೃಹ, ದನದ ಕೊಟ್ಟಿಗೆ ,ವೈಸಯುಕ್ತಿಕ ಕಾಮಗಾರಿಗಳು ಸಹ ಕೈಗೆತ್ತಿಕೊಳ್ಳಲು ಅವಕಾಶವಿದೆ. ಅರ್ಜಿ ಸಲ್ಲಿಸಿದವರಿಗೆ ಕೆಲಸ ನೀಡಲಾಗುವುದು ಎಂದು ತಿಳಿಸಿದರು.

ಅಭಿವೃದ್ದಿಯಲ್ಲಿ ಹಿನ್ನಡೆ ಸದಸ್ಯರ ಅಸಮಾಧಾನ:
ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿಲ್ಲ. ಸಾಮಾನ್ಯ ಸಭೆ, ವಾರ್ಡ್ ಸಭೆ, ಗ್ರಾಮ ಸಭೆಗಳು ನಿಯಮಾನುಸಾರ ನಡೆಯುತ್ತಿಲ್ಲ. ಸದಸ್ಯರಿಗೂ ಯಾವುದೇ ಮಾಹಿತಿ ನೀಡುತ್ತಿಲ್ಲ. ನೀರುಗಂಟಿಗಳು, ಕಚೇರಿ ಸಿಬ್ಬಂದಿಗಳಿಗೆ ಎರಡು ವರ್ಷಗಳಿಂದ ವೇತನ ನೀಡಿಲ್ಲ. ನಮಗೂ ಗೌರವಧನ ನೀಡುತ್ತಿಲ್ಲವೆಂದು ಗ್ರಾ.ಪಂವಸದಸ್ಯ ನಾಗರಾಜಯ್ಯ ದೂರಿದರು.

ಹಿರೇಮಲ್ಲನಹೊಳೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಶೌಚಗೃಹ ಅಗತ್ಯವಿದ್ದು ಶೀಘ್ರವೇ ನಿರ್ಮಿಸಿಕೊಡುವಂತೆ ಸದಸ್ಯರಾದ ಸುರೇಶ್, ರಜೀಯಾಬಿ ಒತ್ತಾಯಿಸಿದರು. ಗೊಲ್ಲರ ಹಟ್ಟಿ ಸದಸ್ಯೆ ಈರಮ್ಮ ನಮ್ಮ ಗ್ರಾಮದ ಹಳೇ ಶಾಲಾ ಕಟ್ಟಡ ದುರಸ್ತಿಗೊಳಿಸಲು ಗ್ರಾಮದ ಅಭಿಪ್ರಾಯ ಪಡೆಯದೆ ತೆರವು ಮಾಡಬಾರದು ಎಂದು ಆಗ್ರಹಿಸಿದರು.

ದಿಬ್ಬದಹಳ್ಳಿ ಗ್ರಾಮದಲ್ಲಿ ಈಗಾಗಲೇ ನೀರಿನ ಟ್ಯಾಂಕ್ ತೆರವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಸ್ಯರಾದ ಶರಣಪ್ಪ , ಶ್ರೀನಿವಾಸ್ ನಡುವೆ ವಾಗ್ವಾದ ನಡೆಯಿತು. ಪಿಡಿಒ ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಿದರು.

ಈ ಸಂದರ್ಭದಲ್ಲಿ ಲೆಕ್ಕ ಸಹಾಯಕ ಪಿ.ಪರುಶುರಾಮಪ್ಪ, ಸದಸ್ಯರಾದ ಪದ್ಮಕ್ಕ , ಶಿವಣ್ಣ , ಬೇಬಿ ನಾಗರಾಜ್ , ವಿಶಾಲಾಕ್ಷಿ ವೀರೇಶ್ , ನಾರಾಯಣ ರೆಡ್ಡಿ , ರಂಗಪ್ಪ , ಶರಣಪ್ಪ , ಶ್ರೀನಿವಾಸ್ , ರಜೀಯಾ ಬಿ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!