ಸುದ್ದಿವಿಜಯ, ಜಗಳೂರು: ತಾಲೂಕಿನ ಕ್ಯಾಸೇನಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಟಿ.ನಾಗರಾಜ್, ಉಪಾಧ್ಯಕ್ಷರಾಗಿ ಪಿ.ನಾಗರಾಜ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ತಿಳಿಸಿದರು.
ಎಸ್ಟಿ ಮೀಸಲು ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಅಂಜಿನಮ್ಮ ಬೋರಪ್ಪ ಹಾಗೂ ಸಾಮಾನ್ಯ ಮೀಸಲು ಕ್ಷೇತ್ರದ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಹುಚ್ಚಪ್ಪ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.
![ತಾಲೂಕಿನ ಕ್ಯಾಸೇನಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಟಿ.ನಾಗರಾಜ್, ಉಪಾಧ್ಯಕ್ಷರಾಗಿ ಪಿ.ನಾಗರಾಜ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.](http://suddivijaya.com/wp-content/uploads/2023/01/gp-pricedent-2.jpg)
ಒಟ್ಟು 18 ಜನ ಗ್ರಾಮಪಂಚಾಯಿತಿ ಸದಸ್ಯರನ್ನೊಳಗೊಂಡಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಒಬ್ಬರೇ ಅಭ್ಯರ್ಥಿಗಳು ಉಮೇದಾರುಕೆ ಸಲ್ಲಿಸಿದ್ದರು. ಬೇರೆ ಯಾರೋಬ್ಬರು ಪ್ರತಿ ಸ್ಪರ್ಧಿ ಇಲ್ಲದ ಕಾರಣ ನಾಮಪತ್ರಗಳ ಊರ್ಜಿತವಾಗಿದ್ದು, ಅವಿರೋಧವಾಗಿ ಆಯ್ಕೆಯಾದರು.
ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಅಂಜಿನಮ್ಮ,ಮಾಜಿ ಉಪಾಧ್ಯಕ್ಷಹುಚ್ಚಪ್ಪ,ಹನುಮಂತ,ಮಂಜಣ್ಣ,ತಿಮ್ಮನಕಟ್ಟೆ ರೇವಣ್ಣ,ತಾತಪ್ಪ,ಗೌರಿಪುರ ಎರ್ರಿಸ್ವಾಮಿ,ನಾಗರತ್ನಮ್ಮ,ರತ್ನಮ್ಮ,ಅಂಜಿನಮ್ಮ ಬೋಸಪ್ಪ,ಗೌಡಗೊಂಡನಹಳ್ಳಿ ಬಸಪ್ಪ, ದೇವಿಕೆರೆ ನಾಗರಾಜ್, ಬಸವನಕೋಟೆ ಪಿಡಿಓ ಶ್ರೀನಿವಾಸ್, ಅಂಜಿನಪ್ಪ, ಬೋಸಪ್ಪ,ಬಸವರಾಜ್ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.