ಸಂಗೇನಹಳ್ಳಿ ಕ್ರಾಸ್‍ನಲ್ಲಿ ಫೆ.1ರಿಂದ ಆದಿಶಕ್ತಿ ಕೊಂಡ್ಲಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ

Suddivijaya
Suddivijaya January 30, 2023
Updated 2023/01/30 at 1:58 PM

ಸುದ್ದಿವಿಜಯ, ಜಗಳೂರು: ತಾಲೂಕಿನ ಸಂಗೇನಹಳ್ಳಿ ಗೇಟ್‍ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆದಿಶಕ್ತಿ ಕೊಂಡ್ಲಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆಯನ್ನು ಇದೇ. ಫೆ. 1ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಫೆ.1ರಿಂದು ಬುಧವಾರ ದೇವಿಯ ಮೂರ್ತಿಯ ಆಗಮನವಾಗಲಿದೆ. ಫೆ.2 ರಂದು ಗುರುವಾರ ಆಕನೂರು ತಿರುವಿನಮಡಗು ಸ್ಥಳದಲ್ಲಿ ದೇವಿಗೆ ವಿಶೇಷ ಅಭಿಷೇಕ, ಗಂಗಾಪೂಜೆ ನಡೆಯಲಿದೆ.

ಫೆ.3ರಂದು ಬೆಳಗಿನ ಜಾವ 3 ಗಂಟೆಗೆ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹೋಮ, ರುದ್ರಾಭಿಷೇಕ ನೆರವೇರಿಸಲಾಗುವುದು. ನಂತರ ಪೂಜಾ ಕಾರ್ಯಕ್ರಮಗಳಾದ ಮಹಾ ಮಂಗಳಾರತಿ, ಭಕ್ತರಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!