ಸುದ್ದಿವಿಜಯ, ಜಗಳೂರು: ಇದೇ ಪ್ರಪ್ರಥಮ ಬಾರಿಗೆ ಜಗಳೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ‘ಜಗಳೂರು ಪ್ರೀಮಿಯರ್ ಲೀಗ್’ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆ ಮಾಡಲಾಗಿದೆ ಎಂದು ಆಯೋಜನೆ ನೇತೃತ್ವ ವಹಿಸಿರುವ ನಾಗರಾಜ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.23 ರಿಂದ 25 ರವರೆಗೆ ಆಯೋಜನೆ ಮಾಡಲಾಗಿದೆ. ಟೂರ್ನಿಮೆಂಟ್ನಲ್ಲಿ ಒಟ್ಟು 10 ಟೀಂಗಳು ಭಾಗವಹಿಸಲಿವೆ. ತಾಲೂಕು ಮಟ್ಟದ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಟೂರ್ನಿಮೆಂಟ್ ಅಧ್ಯಕ್ಷರಾದ ಶಾಸಕ ಬಿ.ದೇವೇಂದ್ರಪ್ಪ ಮತ್ತು ಇನ್ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯ್ಕುಮಾರ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಪ್ರಥಮ ಬಹುಮಾನ 1 ಲಕ್ಷ ರೂ, ದ್ವಿತೀಯ ಬಹುಮಾನ 50 ಸಾವಿರ ರೂ ಇರಲಿದೆ.ಜೆಪಿಎಲ್ ಕ್ರಿಕೆಟ್ ಲೀಗ್ ಆಯೋಜಕರು ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಪಂದ್ಯ ಶ್ರೇಷ್ಠ ಸೇರಿದಂತೆ ಅನೇಕ ಬಹುಮಾನಗಳು ಇರಲಿವೆ. ಆರು ಓವರ್ ಮ್ಯಾಚಿನ ಪಂದ್ಯಗಳಾಗಿದ್ದು, ಅಂಪೈರ್ಗಳನ್ನು ಬೆಂಗಳೂರಿನಿಂದ ಕರೆಸಲಾಗುತ್ತಿದೆ ಎಂದರು.
ಪಂದ್ಯಾವಳಿ ನೇರ ಪ್ರಸಾರವನ್ನು ಯೂಟೂಬ್ನಲ್ಲಿ ನೀಡಲಾಗುವುದು. ಉದ್ಘಾಟನಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ, ತಾಪಂ ಇಓ ಕೆ.ಟಿ.ಕರಿಬಸಪ್ಪ, ಪಿಂಜಾರ ಸಂಘದ ಅಧ್ಯಕ್ಷ ಪರ್ವೀಜ್ ಬಂಗಲೆ, ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್ ಸೇರಿದಂತೆ ಅನೇಕ ಮುಖಂಡು ಭಾಗವಹಿಸಲಿದ್ದಾರೆ ಎಂದರು.
ಈ ವೇಳೆ ಆಯೋಜಕರಾದ ಮಸ್ಟೂರಪ್ಪ, ಶಾರುಖ್, ಪೃಥ್ವಿ, ನವಾಜ್, ಶಮಿಉಲ್ಲಾ, ಮಾರುತಿ, ಷಗೀರ್, ಸಂದೀಪ್ ಸೇರಿದಂತೆ ಅನೇಕರು ಇದ್ದರು.