ಇಂದಿನಿಂದ ಕೃಷಿ ಇಲಾಖೆಯಲ್ಲಿ ತಡಪಾಲು ವಿತರಣೆಗೆ ಅರ್ಜಿ ಆಹ್ವಾನ

Suddivijaya
Suddivijaya August 23, 2023
Updated 2023/08/23 at 3:32 AM

ಸುದ್ದಿವಿಜಯ, ಜಗಳೂರು: ಕೃಷಿ ಸಂಸ್ಕರಣೆ, ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಅಡಿ ಪ್ರಸ್ತುತ 2023-24ನೇ ಸಾಲಿನ ತಾಡಪಾಲುಗಳನ್ನು(Agricultural Tarpaulins) ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ.23ರ ಬುಧವಾರದಿಂದ ಆ.31 ರ ಗುರುವಾರದ ವರೆಗೆ ರೈತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವೇಳೆ ಆಧಾರ್ ಕಾರ್ಡ್ ನಕಲು, ಪಹಣಿ ಜಾತಿ ಪ್ರಮಾಣ ಪತ್ರ ದಾಖಲಗಳನ್ನು ಹತ್ತಿರದ ರೈತ ಸಂಪರ್ಕ ಕಚೇರಿ ಸಲ್ಲಿಸಬೇಕು. ಕಳೆದ ಮೂರು ವರ್ಷಗಳಿಂದ ತಾಡಪಾಲು ಪಡೆದವರು ಅರ್ಜಿಸಲ್ಲಿಸಲು ಅವಕಾಶವಿಲ್ಲ.

ಸಲ್ಲಿಸಿದ ಅರ್ಜಿಗಳ ಆಯ್ಕೆಯನ್ನು ಸೆ.2 ರಂದು ಶನಿವಾರ ಲಾಟರಿ ಮೂಲಕ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದಲ್ಲಿ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಗಳಿಗೆ ಒಂದು ವಾರದ ಒಳಗೆ ತಡಪಾಲು ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!