ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಪ್ರಚಾರ ಜೋರು, ಹೋದಲ್ಲೆಲ್ಲಾ ಆರತಿ ಸ್ವಾಗತ!

Suddivijaya
Suddivijaya May 7, 2023
Updated 2023/05/07 at 2:03 PM

ಸುದ್ದಿವಿಜಯ, ಜಗಳೂರು: ಬಹಿರಂಗ ಪ್ರಚಾರಕ್ಕೆ ಇರುವುದು ಒಂದೇ ದಿನ ಬಾಕಿ. ಹೀಗಾಗಿ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಸಹ ಕ್ಷೇತ್ರದ ನಾನಾ ಕಡೆ ಬಿರುಸಿನ ಪ್ರಚಾರ ಮಾಡಿ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ತಮ್ಮ ಕಾರ್ಯಕರ್ತರು, ಮುಖಂಡರೊಂದಿಗೆ ಬಿರುಸಿನ ಪ್ರಚಾರ ಮಾಡಿದರು. ಅನೇಕ ಗ್ರಾಮಗಳಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು. ತಾಲೂಕಿನ ಗಡಿಗುಡಾಳ್, ಮಾದಿಹಳ್ಳಿ, ಬುದಿಹಾಳ್, ಹೊಸಕೋಟೆ, ಕೆರೆಗೂಡಳ್ಳಿ, ಕಬ್ಬಳ್ಳಿ, ಕೋಣನಕಟ್ಟೆ, ಕಮ್ಮತ್ತಹಳ್ಳಿ, ಪುಣಭಘಟ್ಟ, ಹೊನ್ನಾಪುರ, ಕಾವಲಹಳ್ಳಿ, ನೆಲೆಗೊಂಡನಹಳ್ಳಿ, ಪುಣಭಘಟ್ಟ ತಾಂಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಬಿಜೆಪಿ ಸರಕಾರ ಮಾಡಿರುವ ಕಾರ್ಯಗಳ ಮೇಲೆ ಮತಯಾಚನೆ ಮಾಡುತ್ತಿದ್ದೇವೆ. ಈ ಹಿಂದೆ ಯಾರೂ ತರದಷ್ಟು ಯೋಜನೆಗಳನ್ನು ನಮ್ಮ ಸರಕಾರ ತಂದಿದೆ. 57 ಕೆರೆಗೆ ನೀರು ತುಂಬಿಸುವ ಕಾರ್ಯ ಶರವೇಗದಲ್ಲಿ ಸಾಗುತ್ತಿದೆ. ಅಪ್ಪರ್‍ಭದ್ರಾ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ 3500 ಕೋಟಿ ರೂ ಅನುದಾನ ತಂದಿದ್ದೇನೆ. ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ. ನನ್ನ ಕೆಲಸಕ್ಕೆ ಮತ ಬೇಡುವ ಮೂಲಕ ಕೂಲಿ ಕೇಳುತ್ತಿದ್ದೇನೆ ಎಂದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!