ಜಗಳೂರು: ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಕಾಂಗ್ರೆಸ್‍ನಿಂದ ಉಚ್ಛಾಟನೆ!

Suddivijaya
Suddivijaya April 30, 2023
Updated 2023/04/30 at 12:01 PM

ಸುದ್ದಿವಿಜಯ,ಜಗಳೂರು: ಪಕ್ಷದಿಂದ ಹೊರ ಹೋಗಿರುವ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಅವರನ್ನು ಇನ್ನುರಡು ದಿನಗಳಲ್ಲಿ ಉಚ್ಛಾಟನೆ ಮಾಡಲಾಗವುದು. ಕ್ಷೇತ್ರದ ಜನ ಸಂಪೂರ್ಣವಾಗಿ ಅವರನ್ನು ತಿರಸ್ಕರಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕರೆ ನೀಡಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಕಮಿಟಿ, ವರಿಷ್ಠರ ಅಭಿಪ್ರಾಯ, ಸರ್ವೆ ವರದಿಗಳಲ್ಲಿ ರಾಜೇಶ್ ಅವರ ಹೆಸರು ಇದ್ದಿಲ್ಲ. ಇದನ್ನೇ ನಾನೇ ಈಗ ಬಹಿರಂಗವಾಗಿ ಹೇಳುತ್ತಿದ್ದೇನೆ.

ಈ ಬಾರಿ ನಿನಗೆ ಟಿಕೆಟ್ ರಾಜೇಶ್ ಸಿಗಲ್ಲ. ಜನಾಭಿಪ್ರಾಯ ನಿನ್ನ ಪರ ಇಲ್ಲ. ನೂರಕ್ಕೆ ನೂರು ನೀನು ಸೋಲುತ್ತೀಯ ಎಂದು ಹೇಳಿದ್ದೆ. ಆದರೆ ಸುಳ್ಳು ಹೇಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು ಕಾರ್ಯಕರ್ತರ ದಿಕ್ಕು ತಪ್ಪಿಸುತ್ತಿದ್ದಾರೆ. ರಾಜೇಶ್ ಅವರಿಗೆ ವೋಟ್ ಹಾಕಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!