ರಸ್ತೆ ಪಕ್ಕ ಮನೆಗಳ ಡೆಮಾಲಿಷನ್ ಮಾಡಿದ ಮಣ್ಣು ಸುರಿದವರಿಗೆ ಶಾಸಕರ ಎಚ್ಚರಿಕೆ!

Suddivijaya
Suddivijaya June 11, 2023
Updated 2023/06/11 at 7:00 AM

ಸುದ್ದಿವಿಜಯ, ಜಗಳೂರು:ಅಧಿಕಾರಿಗಳೇ ಎನ್ ಮಾಡ್ತಿದ್ದೀರಿ… ಇದೇನು ರಸ್ತೆಯೋ… ಈ ರೀತಿ ಮಣ್ಣು ಸುರಿಯುವ ವ್ಯಕ್ತಿಗಳನ್ನು ನೋಡಿ ಕಣ್ಣು ಮುಚ್ಚಿಕೊಂಡು ಕುಳಿತಿದ್ದೀರೇನು ಎಂದು ಪಪಂ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡವರು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ.

ಹೌದು, ಜಗಳೂರು ಪಟ್ಟಣದ ಮರೇನಹಳ್ಳಿ ರಸ್ತೆ ಇಕ್ಕೆಲಗಳಲ್ಲಿ ಸಾರ್ವಜನಿಕರು ಮನೆಗಳನ್ನು ಕೆಡವಿದ ಮಣ್ಣು ಸುರಿದು ಹೋಗಿದ್ದು ಭಾನುವಾರ ಬೆಳ್ಳಂಬೆಳಿಗ್ಗೆ ಭೇಟಿ ನೀಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಿರಿದಾದ ರಸ್ತೆಯಲ್ಲಿ ಕಟ್ಟಡ ಕೆಡವಿದ ಮಣ್ಣು, ಕಲ್ಲುಗಳನ್ನು ರಸ್ತೆ ಬದಿಯಲ್ಲೇ ಅಲ್‍ನೋಡ್ ಮಾಡಿರುವ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ, ಲೋಕೋಪಯೋಗಿ ಇಲಾಖೆ ಮತ್ತು ಪಪಂ ಅಧಿಕಾರಿ ಕಿಫಾಯತ್ ಅಹ್ಮದ್ ಅವರಿಗೆ ಚಾಟಿ ಬೀಡಿದರು.

ರಸ್ತೆಬದಿಯಲ್ಲಿ ಹಾಕಲು ಅವಕಾಶ ಕೊಡಬೇಡಿ. ತಕ್ಷಣವೇ ತೆರವುಗೊಳಿಸಿ. ಕಸ ಸುರಿಯುವ ವ್ಯಕ್ತಿಗಳಿಗೆ ದೊಡ್ಡಮಟ್ಟದಲ್ಲಿ ದಂಡ ಹಾಕಿ ಎಂದು ಎಚ್ಚರಿಕೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!