ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರ ಮೆರವಣಿಗೆಗೆ ಚಾಲನೆ

Suddivijaya
Suddivijaya March 13, 2023
Updated 2023/03/13 at 8:31 AM

ಸುದ್ದಿವಿಜಯ, ಜಗಳೂರು: ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿಆರ್ ಅಂಬೇಡ್ಕರ್ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ಅದ್ದೂರಿ ಮೆರವಣಿಗೆ ಸಾಗಿತು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವ ಚಿತ್ರವನ್ನು ಬೆಳ್ಳಿರಥದಲ್ಲಿ ಕೂರಿಸಿ ತಹಸೀಲ್ದಾರ್ ಸಂತೋಷ್ ಕುಮಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮೆರವಣಿಗೆಗೆ ಚಾಲನೆ ನೀಡಿದರು.

 

ಚಿತ್ರದುರ್ಗದ ಶಾರದ ಬ್ರಾಸ್ ಬ್ಯಾಂಡ್‍ನಿಂದ ದಲಿತ ನಾಯಕ ಅಂಬೇಡ್ಕರ್ ಕುರಿತು ಕಂಠಗಾಯನ, 23 ವಿವಿಧ ಬಗೆಯ ಛದ್ಮವೇಷಧಾರಿಗಳ ಗೊಂಬೆ ಕುಣಿತ,

ಹೆಣ್ಣುಮಕ್ಕಳ ತಮಟೆ ಸುದ್ದು, ಚಿತ್ರದುರ್ಗ ಕಲಾ ತಂಡಗಳಿಂದ ನಾಸಿಕ್ ಡೋಲ್ ನೋಡುಗರನ್ನು ಮಂತ್ರಮುಗ್ದಗೊಳಿಸಿತು. ಪಟ್ಟಣದ ಬೀದಿ ಬೀದಿಗಳಲ್ಲಿ ಜೈಭೀಮ್ ಜೈಕಾರ ಮುಗಿಲು ಮುಟ್ಟಿತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!