ಸುದ್ದಿವಿಜಯ, ಜಗಳೂರು: ಕುಡಿಯುವ ನೀರಿನ ಸಮಸ್ಯೆ ಕುರಿತು ಕೆಳಗೋಟೆ ಗ್ರಾಮದ ಮುಖಂಡರು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಶನಿವಾರ ಬೋರ್ ಕೊರೆಸಿದ್ದು 4 ಇಂಚು ನೀರು ಸಿಗುತ್ತಿದ್ದಂತೆ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.
ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಯೇ ಕೆಳಗೋಟೆ ದೊಡ್ಡ ಗ್ರಾಮ ಸುಮಾರು 450ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಆದರೆ ಈಗಿರುವ ಬೋರ್ವೆಲ್ ಗಳಿಂದ ಗ್ರಾಮದ ಜನರಿಗೆ ಕುಡಿಯಲು ನೀರು ಸಾಕಾಗುತ್ತಿರಲಿಲ್ಲ.
ಹಾಗಾಗಿ ಗ್ರಾಮದ ಅಹಮದ್ ಅಲಿ, ಭದ್ರಿ, ಅಜ್ಜಯ್ಯ, ಯೋಗೇಶ್, ಹನುಮಂತಪ್ಪ, ಶಿವುಕುಮಾರ್ ಸೇರಿದಂತೆ ಹತ್ತಾರು ಮುಖಂಡರು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅವರನ್ನು ಭೇಟಿ ಮಾಡಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ್ದರು.
ತಕ್ಷಣವೇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗೆ ಕರೆ ಮಾಡಿ, ಕೆಳಗೋಟೆ ಗ್ರಾಮದಲ್ಲಿ ಶನಿವಾರ ಬೋರ್ಕೊರೆದು ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿಬೇಕು ಎಂದು ಸೂಚನೆ ನೀಡಿದ್ದರು. ಅದರಂತೆ ಇಂದು ಕೊರೆದ ಬೋರ್ವೆಲ್ 80 ಅಡಿಗೆ 2 ಇಂಚು ನೀರು ಸಿಕ್ಕಿದ್ದು 330ಅಡಿಗೆ 3 ಇಂಚು ನೀರು ಸಿಕ್ಕಿರುವುದು ಗ್ರಾಮಸ್ಥರಲ್ಲಿ ಹರ್ಷ ತಂದಿದೆ.
ಸ್ಥಳಕ್ಕೆ ಶಾಸಕರ ಪುತ್ರ ಕೀರ್ತಿಕುಮಾರ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಕೆಲವೊತ್ತು ಚರ್ಚಿಸಿದರು. ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು, ಏನಾದರು ಸಮಸ್ಯೆಗಳಿದ್ದರೇ ನೇರವಾಗಿ ನಮ್ಮ ಸಂಪರ್ಕಿಸಿ, ನಿಮ್ಮ ಜತೆ ನಾವೀರುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ನರೇಶ್, ಜಕಾವುಲ್ಲಾ, ಮುಖಂಡರಾದ ಅಹಮದ್ ಅಲಿ, ಪ್ರಕಾಶ್, ಚಿತ್ರಪ್ಪ, ಯೋಗೇಶ್, ಲುಕ್ಮಾನ್, ಮಧುಕುಮಾರ್, ನಾಗರಾಜ್, ಬಸವರಾಜ್,ಅಜ್ಜಯ್ಯ ಸೇರಿದಂತೆ ಮತ್ತಿತರಿದ್ದರು.