ಇಂದಿರಾ ಕ್ಯಾಂಟೀನ್‍ನಲ್ಲಿ ಉಪಹಾರ ಸೇವಿಸಿದ ಶಾಸಕ ದೇವೇಂದ್ರಪ್ಪ: ಗುತ್ತಿಗೆದಾರನಿಗೆ ತರಾಟೆ

Suddivijaya
Suddivijaya June 11, 2023
Updated 2023/06/11 at 7:23 AM

ಸುದ್ದಿವಿಜಯ, ಜಗಳೂರು:ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಉಪಹಾರ ಸರಿ ಇಲ್ಲ, ಊಟ ಸರಿಯಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ನಿಮ್ಮ ಕೈಲಿ ಆದ್ರೆ ಮಾಡಿ ಇಲ್ಲ ಅಂದ್ರೆ ಬಿಟ್ಟು ಹೋಗಿ ಎಂದು ಗುತ್ತಿಗೆದಾರ ವಿಜ್ಞಾನ್ ಅವರಿಗೆ ಎಚ್ಚರಿಕೆ ನೀಡಿದರು.

ಭಾನುವಾರ ಪಟ್ಟಣದ ರೌಂಡ್ಸ್ ಮುಗಿಸಿದ ನಂತರ ಇಂದಿರಾ ಕ್ಯಾಂಟೀನಲ್ಲೇ ಉಪಹಾರ ಸೇವಿಸಲು ಆಗಮಿಸಿ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದಿರಾ ಕ್ಯಾಂಟೀನ್ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ಬಡವರು, ಪೌರ ಕಾರ್ಮಿಕರಿಗೆ ನಿತ್ಯ ನೆರವಾಗುತ್ತದೆ. ಆದರೆ ನಾನೇ ಖುದ್ದು ವೀಕ್ಷಿಸಿ ಉಪಹಾರ ಸೇವಿಸುತ್ತಿದ್ದೇನೆ.

ತಿಂಡಿ ಸರಿಯಿಲ್ಲ. ಮನುಷ್ಯರು ತಿನ್ನಲು ಯೋಗ್ಯವಿಲ್ಲ. ನಿಮಗೆ ಆದರೆ ಮಾಡಿ ಇಲ್ಲ ಅಂದರೆ ಬಿಟ್ಟು ಹೋಗಿ ಎಂದು ನೇರವಾಗಿ ಸೂಚನೆ ನೀಡಿ ಪಪಂ ಆರೋಗ್ಯ ಅಧಿಕಾರಿ ಕಿಫಾಯತ್ ಅಹ್ಮದ್ ಅವರಿಗೆ ನಿರ್ವಹಣೆ ಮಾಡದೇ ಇದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ವೇತನಕ್ಕಾಗಿ ಕಣ್ಣೀರಿಟ್ಟ ಮಹಿಳೆ:

ಕಳೆದ 13 ತಿಂಗಳಿಂದ ಇಂದಿರಾ ಕ್ಯಾಂಟೀನ್ ಕಾರ್ಮಿಕರಿಗೆ ವೇತನ ನೀಡಿಲ್ಲ. ನಮ್ಮ ಮನೆಯಲ್ಲಿ ಕಷ್ಟವಿದೆ. ಸಂಬಳ ಇಲ್ಲದೇ ಇದ್ದರೂ ಕಾರ್ಯನಿರ್ವಹಿಸುತ್ತಿದ್ದೇವೆ.

ದಯಮಾಡಿ ವೇತನ ಕೊಡಿಸಿ ಎಂದು ಕಾರ್ಮಿಕ ಮಹಿಳೆ ಶಾಸಕ ದೇವೇಂದ್ರಪ್ಪ ಎದುರು ಕಣ್ಣೀರು ಹಾಕಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ನನಗೆ ನೋವಾಗುತ್ತಿದೆ. ಕಣ್ಣೀರು ಹಾಕಬೇಡ ಆದಷ್ಟು ಬೇಗ ವೇತನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!