ಪ್ರತಿಯೊಂದು ಸಮುದಾಯದ ಯೋಗ ಕ್ಷೇಮ ನನ್ನ ಆದ್ಯ ಕರ್ತವ್ಯ: ಶಾಸಕ ದೇವೇಂದ್ರಪ್ಪ

Suddivijaya
Suddivijaya June 12, 2023
Updated 2023/06/12 at 2:33 PM

ಸುದ್ದಿವಿಜಯ, ಜಗಳೂರು : ಹಿಂದುಳಿದ ಸಮಾಜಗಳನ್ನ ಗುರುತಿಸಿ ಸರ್ಕಾರದ ಸೌಲಭ್ಯ ಒದಗಿಸುವ ಮೂಲಕ ಪ್ರತಿಯೊಂದು ಸಮಾಜದ ಯೋಗ ಕ್ಷೇಮ ಕಾಪಾಡುವುದೇ ನನ್ನ ಮುಖ್ಯ ಕರ್ತವ್ಯವಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಶಾಸಕರ ನಿವಾಸದಲ್ಲಿ ತಾಲ್ಲೂಕು ಮಡಿವಾಳ ಸಮಾಜದ ವತಿಯಿಂದ ಸನ್ಮಾನ ಕಾರ್ಯಕ್ರಮ ಸ್ವೀಕರಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಕಾಯಕದ ಮೂಲಕ ಬದುಕು ಕಟ್ಟಿಕೊಂಡಿರುವ ಮಡಿವಾಳ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮುಂದು ಬರಬೇಕಿದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನ ನೀಡುತ್ತಿದ್ದು ಅದರಲ್ಲಿ ಸಿಗುವಂತಹ ಸೌಲಭ್ಯವನ್ನ ಬಳಸಿಕೊಳ್ಳಿ ಸಮಾಜದ ಯಾವುದೇ ಸಮಸ್ಯೆ ಇದ್ದರೂ ಸಹ ನೇರವಾಗಿ ಭೇಟಿಮಾಡಿ ಬಗೆಹರಿಸಿಕೊಳ್ಳಿ ಎಂದರು
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರೇವಣ ಸಿದ್ದಪ್ಪ , ರಮೇಶ್ , ಅನಸೂಯಮ್ಮ , ದೇವಿಕೆರೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಂ.ಎಲ್.ನಾಗರಾಜ್ , ಬಸವಾಪುರ ಅಣ್ಣೇಶ್ , ಸೇರಿದಂತೆ ಹಲವರು ಇದ್ದರು

Share this Article
Leave a comment

Leave a Reply

Your email address will not be published. Required fields are marked *

error: Content is protected !!