ಕೆಡಿಪಿ ಸಭೆಗೆ ಆಗಮಿಸಿದ ಶಾಸಕ ದೇವೇಂದ್ರಪ್ಪ ಸ್ವಾಗತ ಕೋರಿದ ಮಹೇಶ್ವರಪ್ಪ

Suddivijaya
Suddivijaya June 2, 2023
Updated 2023/06/02 at 4:11 PM

ಸುದ್ದಿವಿಜಯ, ಜಗಳೂರು: ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರನ್ನು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಸ್ವಾಗತಿಸಿದರು.

11 ಗಂಟೆಗೆ ಶಾಸಕ ದೇವೇಂದ್ರಪ್ಪ ತಾಪಂ ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಮಹೇಶ್ವರಪ್ಪ ಅವರು ಎದುರಾದರು.

ಮಾಯಣ್ಣ ಎಂದು ಪ್ರೀತಿಯಿಂದ ಕರೆದ ದೇವೇಂದ್ರಪ್ಪ ಅವರು ಕೈ ಹಿಡಿದು ಆಪ್ಯಾಯಮಾನವಾಗಿ ವಿಚಾರಿಸಿದರು.

ಕೆಡಿಪಿ ಸಭೆಯಲ್ಲಿ ಹಾಸ್ಟೆಲ್ ಕೊರತೆಯ ಬಗ್ಗೆ ಮಹೇಶ್ವರಪ್ಪ ಪ್ರಸ್ತಾಪಿಸಿದಾಗ ಸಮಸ್ಯೆಯನ್ನು ಗಂಭೀರವಾಗಿ ಆಲಿಸಿದ ಶಾಸಕರು. ಆದಷ್ಟು ಬೇಗ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ತಹಶಿಲ್ದಾರ್ ಜಿ.ಸಂತೋಷ್ ಕುಮಾರ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್,ತಾಪಂ ಇಓ ಚಂದ್ರಶೇಖರ್ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!