ಸುದ್ದಿವಿಜಯ, ಜಗಳೂರು: ವಿದ್ಯಾರ್ಥಿಗಳಿಗೆ ಓದಿನಲ್ಲಿ ಶ್ರದ್ಧೆ, ಗುರಿಯಿದ್ದರಷ್ಟೇ ಸಾಧನೆಯ ಶಿಖರ ಏರಲು ಸಾಧ್ಯ ಎಂದು ನಾಲಂದ ಕಾಲೇಜು ಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣದ ನಾಲಂದ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ ಹಾಗೀ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಜೀವನ ದೇಸೆಯಲ್ಲಿ ಶ್ರದ್ಧೆ ಇಲ್ಲದೆ ಜೀವನ ಹಾಳು ಮಾಡಿ ಕೊಳುತ್ತಿದ್ದರೆ ಶ್ರದ್ಧೆಯಿಂದ ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ಉನ್ನತ ಶ್ರೇಣಿಗಳಿ ಯಶಸ್ಸು ಕಾಣಾಬಹುದು.
![ಜಗಳೂರು ಪಟ್ಟಣದ ನಾಲಂದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.](http://suddivijaya.com/wp-content/uploads/2023/08/7JLR2A.jpg)
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳುಲ್ಲಿ ಉತ್ತಮ ಅಂಗಳನ್ನು ಪಡೆಯುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳೊಂದಿಗೆ ಕ್ರೀಡಾ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತ ಹೇಳಿದರು.
ಕನ್ನಡ ನಿವೃತ್ತ ಉಪನ್ಯಾಸಕ ವಸಂತ ಅವರು ವಿಧ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣಕ್ಕೆ ಆದ್ಯತೆ ನೀಡಿ ಪೆÇೀಷಕರು ಶಿಕ್ಷಕರನ್ನು ಗೌರವಿಸಿ ಎಂದರು.
ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳು ಸಂಘದ ಅಧ್ಯಕ್ಷ ಬಿ. ಏನ್.ಎಂ.ಸ್ವಾಮಿ,
ಉಪನ್ಯಾಸಕರಾದ ನಾಗೇಶ್ ಆರ್, ಕೆ.ಪಿ. ದೇವರಾಜ್, ರಾಜಣ್ಣ, ಪರಮೇಶ್ವರಪ್ಪ, ರಾಜೇಶ್ ಜೈನ್ ಸೇರಿದಂತೆ ಮತ್ತಿತರರಿದ್ದರು.