ರಾಮಕೃಷ್ಣ ಕೊಲೆ ಆರೋಪಿಗಳನ್ನು ಬಂಧಿಸಿಸಲು ವಿವಿಧ ಸಂಘಟನೆಗಳಿಂದ ಪ್ರತಿಭಟನೆ!

Suddivijaya
Suddivijaya January 9, 2023
Updated 2023/01/09 at 1:39 PM

ಸುದ್ದಿವಿಜಯ, ಜಗಳೂರು: ಸಾಮಾಜಿಕ ಕಾರ್ಯಕರ್ತ ಗೌರಿಪುರ ರಾಮಕೃಷ್ಣ ಹತ್ಯೆ ಮಾಡಲು ಕುಮ್ಮಕ್ಕು ನೀಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ತಾಲೂಕು ನಾಯಕ ಸಮಾಜದ ಮುಖಂಡು, ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಒತ್ತಾಯಿಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.

ತಾಲ್ಲೂಕು ನಾಯಕ ಸಮಾಜದ ಕಾರ್ಯದರ್ಶಿ ಸೂರಲಿಂಗಪ್ಪ ಮಾತನಾಡಿ, ಶನಿವಾರ ಸಂಜೆ ಹೊಸಕೆರೆ ಸಮೀಪದ ಡಾಬಾ ವೊಂದರಲ್ಲಿ ರಾಮಕೃಷ್ಣ ಅವರನ್ನ ಕರಸಿಕೊಂಡು ಹತ್ಯೆ ಮಾಡಲಾಗಿದೆ ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಈಗಾಗಲೇ ಇಬ್ಬರು ಆರೋಪಿಗಳು ಶರಣಾಗತಿಯಾಗಿದ್ದಾರೆ ಆದರೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಡಿಒ ಎ.ಟಿ.ನಾಗರಾಜ್ ತಲೆ ಮರಿಸಿಕೊಂಡಿದ್ದು ಕೂಡಲೇ ಬಂದಿಸದಿದ್ದರೇ ಜಗಳೂರು ಪಟ್ಟಣದ ಬಂದ್ ಮಾಡಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಡಿಎಸ್‍ಎಸ್ ಮುಖಂಡ ಬಿ.ಸತೀಶ್ ಮಾತನಾಡಿ, ತಾಲೂಕಿನಲ್ಲಿ ಭ್ರಷ್ಟಾಚಾರ ವಿರುದ್ದ ಹೋರಾಟ ಮಾಡುವಂತಹ ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರ ಹೋರಾಟ ಗಾರ, ವಿವಿದ ಸಂಘಟನೆಗಳ ಮುಖಂಡರಿಗೆ ಭದ್ರತೆ ಇಲ್ಲದಂತಾಗಿದೆ. ಗ್ರಾಮ ಪಂಚಾಯತಿಯ ನರೇಗಾ ಯೋಜನೆ ಹಾಗು 15 ನೇ ಹಣಕಾಸು ಯೋಜನೆಯ ಭ್ರಷ್ಟಾಚಾರ ಬಯಲು ಮಾಡಿ ತಪ್ಪಿತಸ್ಥರಿಗೆ ಕಾನುನು ಕ್ರಮ ಆಗುವಂತೆ ಹೋರಾಟ ಮಾಡಿದ ಯುವಕ ರಾಮಕೃಷ್ಣ ಅವರನ್ನ ಕೊಲೆ ಮಾಡಿರುವುದು ಖಂಡನೀಯ.

ಈ ಘಟನೆಯ ಪ್ರಮುಖ ಆರೋಪಿ ಪಿಡಿಓ ಎ.ಟಿ. ನಾಗರಾಜ್ ಅವರನ್ನ ಸೇವೆಯಿಂದ ವಜಾಗೊಳಿಸಿ ತಪ್ಪಿತಸ್ಥರ ವಿರುದ್ದ ಕಾನುನು ಕ್ರಮ ಜರುಗಿಸಬೇಕು ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಇಲ್ಲ ವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಒತ್ತಾಯಿಸಿದರು.

ವಕೀಲ ಆರ್ ಓಬಳೇಶ್ ಮಾತನಾಡಿದರು. ತಾಲೂಕಿನಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ ಅಕ್ರಮಗಳ ಬಗ್ಗೆ ಪ್ರೆಶ್ನೆ ಮಾಡುವವರನ್ನ ಗುರಿಯಾಗಿಸಿ ಈ ರೀತಿ ಕೃತ್ಯ ಮಾಡಲಾಗುತ್ತಿದೆ.

ಒಬ್ಬ ಸಾಮಾನ್ಯ ಪಿಡಿಓ ಐದಾರು ಬಾರಿ ಅಮಾನತ್ತು ಆಗಿ ವಿವಿದ ಕೇಸ್ ಗಳ ವಿಚಾರಣೆ ಇದ್ದರೂ ಮತ್ತೆ ಇದೇ ತಾಲ್ಲೂಕಿಗೆ ವರ್ಗಾವಣೆ ಆಗಿ ಬಂದಿದ್ದಾನೆ. ಇಂತಹವನಿಗೆ ಮೂರು ನಾಲ್ಕು ಪಂಚಾಯಿತಿ ಜವಾಬ್ದಾರಿ ಕೊಟ್ಟಿದ್ದಾರೆ. ಅಕ್ರಮ ಹಣದಿಂದ ಬೇನಾಮಿ ಆಸ್ತಿ ಮಾಡಿಕೊಂಡು ಪುಡಿರಾಜಕಾರಣಿ ಗಳ ಗುಂಪು ಕಟ್ಟಿಕೊಂಡು ಮೆರೆಯುತ್ತಿದ್ದಾನೆ.

ಎಲ್ಲಾ ಪಂಚಾಯಿತಿಗಳಲ್ಲಿ ಕೋಟಿ ಕೋಟಿ ಅಕ್ರಮ ಎಸಗಿದ್ದಾನೆ. ರಾಜಕಾರಣಿಗಳಿಗೆ ಹಣದ ಆಸೆ ತೋರಿಸಿ ಅವರ ಬಲಗೈ ಬಂಟನಂತೆ ಇರುವ ಎ.ಟಿ.ನಾಗರಾಜ ಬೆಳೆಯಲು ಕಾರಣವೇ ರಾಜಕಾರಣಿಗಳು. ಇಂದು ಅಮಾಯಕನ ಜೀವ ಕಳೆದು ಕೊಂಡಿದ್ದೇವೆ. ಮುಂದೆ ಇಂತಹ ಕೃತ್ಯ ನೆಡೆಯದಂತೆ ಭ್ರಷ್ಟಚಾರ ವಿರುದ್ಧ ಹೋರಾಟ ಮಾಡುವವರಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರಾದ ಮಾಜಿ ಕಾರ್ಯದರ್ಶಿ ಬಿ.ಲೋಕೇಶ್, ಮಾಜಿ ತಾ.ಪಂ. ಸದಸ್ಯರಾದ ಡಿ.ಆರ್. ಹನುಮಂತಪ್ಪ ಕಾನನಕಟ್ಟೆ ಕುಬೇಂದ್ರಪ್ಪ, ಮಾಜಿ ಪ.ಪಂ. ಸದಸ್ಯ ಮಹೇಂದ್ರ, ಭೋವಿ ಸಮಾಜದ ಮುಖಂಡ ದೇವರಾಜ್, ಪಿ. ರೇವಣ್ಣ, ಬುಳ್ಳನಹಳ್ಳಿ ನಾಗರಾಜ್, ಸಿದ್ದಣ್ಣ, ಶಿವಮೂರ್ತಿ, ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಟಿ. ತಿಪ್ಪೇಸ್ವಾಮಿ, ವಿಜಯ್ ಕೆಂಚೋಳ್, ದ್ವಾವೇಶ್, ವೆಂಕಟೇಶ್, ಅನಿಲ್, ದಲಿತ ಸಂಘರ್ಷ ಸಮಿತಿ ಪಧಾದಿಕಾರಿಗಳು ಜೀವನ್, ಪ್ರದೀಪ್, ಉಮೇಶ್ ಸೇರಿದಂತೆ ಹಲವರು ಇದ್ದರು.

9ಜೆಎಲ್‍ಆರ್‍ಚಿತ್ರ2ಎ: ಗೌರಿಪುರ ಗ್ರಾಮದ ರಾಮಕೃಷ್ಣ ಕೊಲೆ ಸಂಬಂಧ ವಿವಿಧ ಸಂಘಟನೆಗಳಿಂದ ತಹಶೀಲ್ದಾರ್‍ಗೆ ಸೋಮವಾರ ಮನವಿ ಸಲ್ಲಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!