ಜಗಳೂರು: ಸಮಾಜಕ್ಕೆ ರೇಣುಕಾ ಚಾರ್ಯರ ಕೊಡುಗೆ ಅನನ್ಯ

Suddivijaya
Suddivijaya March 5, 2023
Updated 2023/03/05 at 2:48 PM

ಸುದ್ದಿವಿಜಯ,ಜಗಳೂರು: ಸಮ ಸಮಾಜ ನಿರ್ಮಾಣ ಮತ್ತು ಮೌಢ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ರೇಣುಕಾ ಚಾರ್ಯರು ಅಪಾರ ಕೊಡುಗೆ ಅನನ್ಯ ಎಂದು ಗ್ರೇಡ್-2 ತಹಶೀಲ್ದಾರ್ ಮಂಜಾನಂದ ಹೇಳಿದರು.

ಭಾನುವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೇಣುಕಾ ಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾರೂ ಒಳ್ಳೆಯ ಕೆಲಸ ಮಾಡಬೇಕು.

ದುಡಿದ ಹಣದಲ್ಲಿ ದಾನ ಧರ್ಮ ಮಾಡುವಂತ ಗುಣಗಳನ್ನು ಬೆಳೆಸಿಕೊಳ್ಳಬೇಕು ಮತ್ತು ನ್ಯಾಯಾಮಾರ್ಗದಲ್ಲಿ ನಡೆಯಬೇಕೆಂದು ಸಾರಿದವರು. ಸರಕಾರವು ಅವರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಮಾಡಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕಾಂಗ್ರೇಸ್‍ನ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ, ಕಾಂಗ್ರೇಸ್ ಮುಖಂಡ ದೇವೆಂದ್ರಪ್ಪ, ಬೇಡ ಜಂಗಮ ಸಮುದಾಯದ ತಾಲೂಕು ಅಧ್ಯಕ್ಷ ಶಿವಕುಮಾರ ಸ್ವಾಮಿ, ಉಪಾಧ್ಯಕ್ಷ ಪಂಚಾಕ್ಷರಯ್ಯ, ಕಾರ್ಯದರ್ಶಿ ನಂಜುಂಡ ಸ್ವಾಮಿ, ವೀರ ಶೈವ ಸಮಾಜದ ತಾಲೂಕು ಅಧ್ಯಕ್ಷ ಶಿವನ ಗೌಡ, ಮುಖಂಡರಾದ ಎನ್.ಎಮ್. ಲೋಕೆಶ್, ಆರಾದ್ಯ, ಸ್ವಾಮಿ, ತಾಲೂಕು ಕಚೇರಿಯ ಸಿಬ್ಬಂದಿಗಳಾದ ಕಾಂತರಾಜ್, ನಿಜಗುಣ ಸೇರಿದಂತೆ ಮತ್ತಿತರರು ಹಾಜರಿದ್ದರು.
5ಜೆಎಲ್‍ಆರ್3ಎ: ಜಗಳೂರು : ಭಾನುವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ರೇಣುಕಾ ಚಾರ್ಯರ ಜಯಂತಿಯನ್ನು ಆಚರಿಸಲಾಯಿತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!