ಜಗಳೂರು :ಬದುಕಿನ ಸಾರವೆಲ್ಲವೂ ಶರಣರ ವಚನಗಳಲ್ಲಿದೆ: ಡಿ.ಸಿ. ಮಲ್ಲಿಕಾರ್ಜುನ್

Suddivijaya
Suddivijaya March 16, 2023
Updated 2023/03/16 at 12:12 PM

ಸುದ್ದಿವಿಜಯ, ಜಗಳೂರು :ಜನರ ಬದುಕು ಹಸನಾಗಲು ಬೇಕಾದ ಎಲ್ಲಾ ವಿಚಾರಗಳು ಶರಣರ ವಚನಗಳಲ್ಲಿ ಅಡಕವಾಗಿವೆ. ಆ ಕಾರಣಕ್ಕಾಗಿಯೇ ಶರಣ ಸಾಹಿತ್ಯ ಎಂಬುದು ಜಗತ್ತಿಗೆ ಕರ್ನಾಟಕ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ ಎಂದು ಜಗಳೂರಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಡಿ.ಸಿ. ಮಲ್ಲಿಕಾರ್ಜುನ್ ರವರು ನುಡಿದರು.

ತಾಲೂಕು ಶರಣ ಸಾಹಿತ್ಯ ಸಾಹಿತ್ಯ ಪರಿಷತ್ತು ವತಿಯಿಂದ ಜಗಳೂರಿನ ಜೆಎಂ ಇಮಾಮ್ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಅನುಭಾವದ ನುಡಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶತ ಶತಮಾನಗಳಿಂದ ಜನರಲ್ಲಿ ತುಂಬಿದ್ದ ಮೌಢ್ಯ, ಜಾತೀಯತೆ, ವರ್ಗ, ವರ್ಣ ಲಿಂಗಭೇದ, ಅಸಮಾನತೆಗಳ ವಿರುದ್ಧ ಬಸವಾದಿ ಶರಣರು ವೈಚಾರಿಕತೆಯ ಭದ್ರಬುನಾದಿಯನ್ನು ಅನುಭವ ಮಂಟಪದ ಮೂಲಕ ನಿಮಿ9ಸಿದರು ಎಂದು ಅವರು ತಿಳಿಸಿದರು.

ತಾಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಟಿ.ಎರ್ರಿಸ್ವಾಮಿ ಮಾತನಾಡಿ, ಮಕ್ಕಳು, ವಿದ್ಯಾರ್ಥಿಗಳು, ಯುವ ಜನರಲ್ಲಿ ವಚನ ಪ್ರೀತಿಯನ್ನು ತುಂಬುವ ಸಲುವಾಗಿ ಪರಿಷತ್ತು ದತ್ತಿ ಉಪನ್ಯಾಸಗಳ ಮೂಲಕ ಸರಳ, ಅರ್ಥಪೂರ್ಣ ಚಟುವಟಿಕೆಗಳನ್ನು ನಡೆಸಲು ಮುಂದಾಗಿದೆ.

 ಜಗಳೂರು ಪಟ್ಟಣದ ಜೆ.ಎಂ. ಇಮಾಂ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
 ಜಗಳೂರು ಪಟ್ಟಣದ ಜೆ.ಎಂ. ಇಮಾಂ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇಂದಿನ ದತ್ತಿ ಕಾರ್ಯಕ್ರಮವನ್ನು ಮಾಜಿ ಶಾಸಕ ಎಚ್.ಪಿ.ರಾಜೇಶ್ ರವರು ತಮ್ಮ ತಾಯಿ ತಂದೆ ಪಾಪಮ್ಮ ಮತ್ತು ಹನುಮಂತಪ್ಪ ಇವರ ಸ್ಮರಣಾರ್ಥ ಪ್ರತಿ ವರ್ಷ ನಡೆಸಲು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು. ಅದೇ ರೀತಿ ಬೇರೆ ಆಸಕ್ತರು ಕೂಡ ದತ್ತಿ ಉಪನ್ಯಾಸಗಳಿಗೆ ನೆರವಾಗಬಹುದು ಎಂದರು.

ಶೈಕ್ಷಣಿಕ ಸಲಹೆಗಾರರಾದ ಡಿ.ಡಿ.ಹಾಲಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಡೆಗೀಲು ಬಂಡಿಗೆ ಆಧಾರವಾದಂತೆ ವಚನಗಳು ಬದುಕಿಗೆ ಆಧಾರವಾಗಿವೆ. ಎಳವೆಯಲ್ಲಿಯೇ ಮಕ್ಕಳ ಮನಃಪಟಲದ ಮೇಲೆ ಶರಣರ ನುಡಿಗಳು ಪ್ರಭಾವ ಬೀರಬೇಕಾದ ಅನಿವಾರ್ಯತೆ ಈಗ ಬಹಳವಿದೆ ಎಂದು ತಿಳಿಸಿದರು.

ಇಮಾಮ್ ಶಾಲೆಯ ಶ್ರೀ ನಾಗರಾಜ್, ಮುಖ್ಯೋಪಾಧ್ಯಾಯರಾದ ಶಂಕರ್ ಶಿಕ್ಷಕರಾದ ಜಯಲಕ್ಷ್ಮೀ, ಗುರುಮೂರ್ತಿ, ಪ್ರದೀಪ್ ಮುಂತಾದವರು ಪಾಲ್ಗೊಂಡಿದ್ದರು. ನೂರಾರು ಜನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!