ಹನುಂತಾಪುರ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು!

Suddivijaya
Suddivijaya July 8, 2023
Updated 2023/07/08 at 5:42 PM

ಸುದ್ದಿವಿಜಯ, ಜಗಳೂರು: ಟ್ರ್ಯಾನ್ಸ್‌ ಫಾರ್ಮರ್ (ಟಿಸಿ) ಕೆಳಗೆ ಹುಲ್ಲು, ಕಸ ಕಡ್ಡಿ ಸ್ವಚ್ಛಗೊಳಿಸುವಾಗ ಈರಣ್ಣ ಎಂಬುವರ ಪುತ್ರ ಬಸವರಾಜ್(45) ವಿದ್ಯುತ್ ಸ್ಪರ್ಶಿಸಿ ಶನಿವಾರ ಸಂಜೆ ಐದು ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.

ತಮ್ಮ ಜಮೀನಿನಲ್ಲಿ ಇರುವ ಟಿಸಿಯ ಸುತ್ತ ಹುಲ್ಕು ಕಸ ಕಡ್ಡಿ ಇದ್ದ ಕಾರಣ ಸ್ವಚ್ಛಗೊಳಿಸಲು ತರೆಳಿದಾಗ ಟಿಸಿಗೆ ಹಾಕಿದ್ದ ಗೈಯ್ ವೈಯರ್ ಮುಟ್ಟಿದ್ದಾರೆ.

ಅದರಲ್ಲಿ ವಿದ್ಯುತ್ ಸರಬರಾಜು ಆಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳೀಯರು ನೋಡಿ ಬೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದಾಗ ವಿದ್ಯುತ್ ಸರಬರಾಜು ನಿಲ್ಲಿಸಿದ್ದಾರೆ. ಸ್ಥಳಕ್ಕೆ ಬಂದು ನೋಡಿದಾಗ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಈ ಘಟನೆ ಸಂಬಂಧ ಜಗಳೂರು ಪಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್ಐ ಸಾಗರ್ ಮತ್ತು ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿಸಿದರು. ಈ ದುರ್ಘಟನೆಯಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!