ಸೊಕ್ಕೆ ಸರಕಾರಿ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ರುಚಿಸಿದ ಜಿಪಂ CEO ಸುರೇಶ್ ಬಿ.ಇಟ್ನಾಳ್

Suddivijaya
Suddivijaya February 15, 2024
Updated 2024/02/15 at 3:37 PM

ಜಗಳೂರು, ಸುದ್ದಿವಿಜಯ: ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಅವರು ಸೊಕ್ಕೆ ಗ್ರಾಮದ ಸರಕಾರಿ ಹಿರಿಯ ಉನ್ನತೀಕರಿಸಿದ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಮಾಡಿದರು.

ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇದೆ ಎಂದು ಗಮನಕ್ಕೆ ಬರುತ್ತಿದ್ದಂತೆ ಶಾಲೆಗೆ ಭೇಟಿ ನೀಡಿದ ಸಿಇಒ ಪರಿಶೀಲಿಸಿದರು. ಅಕ್ಷರ ದಾಸೋಹದ ಅಡುಗೆ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.ಶಿಕ್ಷಕರು ಊಟ ಮಾಡಿ ಸಾರ್ ಎಂದು ಮನವಿ ಮಾಡುತ್ತಿದ್ದಂತೆ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಮಾಡಿ ನಂತರ ತಟ್ಟೆಯನ್ನು ಅವರೇ ತೊಳೆದು ಇತರೆ ಅಧಿಕಾರಿಗಳಿಗೂ ಮಾದರಿಯಾದರು.

ಶೀಘ್ರವೇ ಶಾಲೆಗೆ ಶೌಚಾಲಯ ಮತ್ತು ಮಕ್ಕಳಿಗೆ ಊಟದ ಕೋಠಡಿ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!