ಜಗಳೂರು ತಾಲೂಕು ಯರಲಕಟ್ಟೆ ಬಳಿ ಕಾರು ಪಲ್ಟಿ

Suddivijaya
Suddivijaya November 10, 2022
Updated 2022/11/10 at 2:08 PM

ಸುದ್ದಿವಿಜಯ ಜಗಳೂರು.ಜಗಳೂರು ತಾಲೂಕಿನ ಯರಲಕಟ್ಟೆ ಗ್ರಾಮದ ಬಳಿ ಕಾರು ಪಲ್ಟಿಯಾಗಿ ಪ್ರಾಯಾಣಿಕರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಕಾರು ಪ್ರಯಾಣಿಕರು ಮೂಲತಃ ದಾವಣಗೆರೆ ತಾಲೂಕಿನ ಚಿಗಟೇರಿ ಗ್ರಾಮದವರು ಎನ್ನಲಾಗಿದ್ದು ಚಿಟಗೇರಿ ಗ್ರಾಮದಿಂದ ಮಡ್ರಳ್ಳಿ ಗ್ರಾಮದೇವತೆ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವ ಮಾರ್ಗ ಮದ್ಯದಲ್ಲ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕಾರಲ್ಲಿದ್ದ ಹೆಣ್ಣು ಮಕ್ಕಳು ಸೇರಿದಂತೆ ಐದಾರು ಇದ್ದು ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯರಲಕಟ್ಟೆ- ಗುರುಸಿದ್ದಾಪುರ ಗ್ರಾಮದ ಸಂಪರ್ಕ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ತಗ್ಗು ಗುಂಡಿಗಳು ಬಿದ್ದು ಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ. ಗುತ್ತಿಗೆದಾರನ ಕಳಪೆ ಕಾಮಗಾರಿಯೇ ಈ ಅಘಘಾತಕ್ಕೆ ಕಾರಣ ಎನ್ನಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!