ಅದ್ಧೂರಿಯಾಗಿ ನೆರವೇರಿದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪನವರ ಮೊಮ್ಮಗನ ನಾಮಕರಣ ಶಾಸ್ತ್ರ!

Suddivijaya
Suddivijaya December 18, 2022
Updated 2022/12/18 at 12:17 PM

ಸುದ್ದಿವಿಜಯ, ಜಗಳೂರು: ಮನುಷ್ಯ ಸಂಸ್ಕಾರಯುತವಾಗಿ ಬಾಳಿದರೆ ಅದೇ ನಿಜವಾದ ಮನುಷ್ಯ ಗುಣ ಎಂದು ಕೋಡಿ ಮಠದ ಶ್ರೀಗಳು ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರ ಮೊಮ್ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ಮಗು ಹುಟ್ಟುವಾಗ ನಗುತ್ತ ಹುಟ್ಟುವುದಿಲ್ಲ.

ಅಳುತ್ತಲೇ ಜನ್ಮತಾಳುವ ಮಗು ತನ್ನ ಜೀವಿತ ಅವಧಿಯಲ್ಲಿ ಕಷ್ಟ ಸುಖಗಳ ಮಧ್ಯೆಯೇ ಬೆಳೆಯುತ್ತದೆ. ಬೆಳೆಯುತ್ತಾ ಸಂಸ್ಕಾರಯುತ ಜೀವನ ನಡೆಸಿ ನಾಲ್ಕು ಜನರಿಗೆ ಪರೋಪಕಾರಿಯಾಗಿ ಬಾಳಬೇಕು. ಮೃತ್ಯುವಿನ ನಂತರವೂ ಹೆಸರುಳಿಯುವಂತ ಕೆಲಸ ಮಾಡಿದರೆ ಅದುವೇ ಸಾರ್ಥಕ ಜೀವನ ಎಂದರು.

ಜಗಳೂರು ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರ ಮೊಮ್ಮಗನ ನಾಮಕರಣ ಶಾಸ್ತ್ರ

ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರ ಮೊಮ್ಮಗನಿಗೆ ಎಂ.ವಿ.ಅಗಸ್ತ್ಯನಾಯಕ ಎಂದು ನಾಮಕರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಎಚ್.ಪಿ.ರಾಜೇಶ್, ಅಸಗೋಡು ಜಯಸಿಂಹ, ಕೆ.ಪಿ.ಪಾಲಯ್ಯ, ಶಾಸಕ ಎಸ್.ವಿ.ರಾಮಚಂದ್ರ ಅವರ ಪತ್ನಿ ಇಂದಿರಾ ರಾಮಚಂದ್ರ, ಸವಿತಾಬಾಯಿ ಮಲ್ಲೇಶ್ ನಾಯ್ಕ್, ಕಲ್ಲೇಶ್ ರಾಜ್ ಪಾಟೀಲ್, ನಿವೃತ್ತ ಆರ್‍ಟಿಒ ಶ್ರೀನಿವಾಸ್, ಸುರೇಶ್ ಬಾಬು, ಶಿವನಗೌಡ, ಕೀರ್ತಿ ದೇವೇಂದ್ರಪ್ಪ, ಮಾಜಿ ಶಾಸಕ ಗುರುಸಿದ್ದನಗೌಡ ಸೇರಿದಂತೆ ಬಿಜೆಪಿ, ಕಾಂಗ್ರೆಸ್‍ನ ಅನೇಕ ಕಾರ್ಯಕರ್ತರು ಪಕ್ಷಾತೀತವಾಗಿ  ಭಾಗವಹಿಸಿದ್ದರು.

ಬೂರಿ ಭೋಜನ!
ಕಾರ್ಯಕ್ರಕ್ಕೆ ತಾಲೂಕಿನ ನಾನಾ ಗ್ರಾಮಗಳಿಂದ ಅಂದಾಜು 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಬಂದ ಸಾರ್ವಜನಿಕರಿಗೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಸವಿರುಚಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಗಣ್ಯಾತಿ ಗಣ್ಯರು ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!