ಜಗಳೂರು: ಶ್ರಮವಹಿಸಿ ದುಡಿದು ಬದುಕಿದರೆ ಅಂಬೇಡ್ಕರ್ ಅವರಿಗೆ ಗೌರವ

Suddivijaya
Suddivijaya April 14, 2023
Updated 2023/04/14 at 11:51 AM

ಸುದ್ದಿವಿಜಯ,ಜಗಳೂರು: ದುಡಿದು ಬದುಕಿದರೆ ಮಾತ್ರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಗೆ ಗೌರವ ಎಂದು ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯ ತಾಲೂಕಿನ ಕಾರ್ಯದರ್ಶಿ ಪಿ.ಎಸ್.ಸುಧಾ ಹೇಳಿದರು.

ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯಿಂದ ತಾಲೂಕಿನ ಮರಿಕುಂಟೆ, ಪಲ್ಲಗಟ್ಟೆ, ಮುಗ್ಗಿದ ರಾಗಿಹಳ್ಳಿ, ಬಿಳಿಚೋಡು, ಮಾದೇನಹಳ್ಳಿ, ಮೆದಿಕೆರನಹಳ್ಳಿ ಗ್ರಾಮಗಳಲ್ಲಿ ಶುಕ್ರವಾರ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಎಲ್ಲಾ ಜಾತಿ ಜನಾಂಗದವರು ಸೇರಿ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು  ಎಲ್ಲಾ ಕೂಲಿ ಕಾರ್ಮಿಕರು ಸೇರಿ ಎಲ್ಲಾ ಜನಾಂಗದವರು ಆಚರಿಸೋಣ ಎಂದರು.

ಈ ವೇಳೆ ಪಲ್ಲಗಟ್ಟೆ ನೇತ್ರ, ಮುಗಿದರಾಗಿಹಳ್ಳಿ ಕಾರ್ಮಿಕರದ ತಿಪ್ಪಮ್ಮ ಅನಿತಾ ರತ್ನಮ್ಮ ಮರಿಕುಂಟೆ ನಾಗರಾಜ, ಹನುಮಂತಪ್ಪ, ಮೆದಿಕೇರನಹಳ್ಳಿ ಕಲ್ಪನಾ, ಶಿವು, ಹುಲಿಗೇಶ, ಮನು ಮಾದೀನಹಳ್ಳಿ ನಾಗರಾಜ್, ಪರಮೇಶ್ವರಪ್ಪ ರಾಮಲಿಂಗಪ್ಪ ಮುಂತಾದವರು ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!