ಸುದ್ದಿವಿಜಯ,ಜಗಳೂರು:ತಾಲೂಕಿನ ಯರಲಕಟ್ಟೆ ಗ್ರಾಮದ ಹಳೆಯ ಶಾಲೆಯ ಮುಂದೆ ಇಸ್ಪೀಟು ಆಡುತ್ತಿದ್ದ ಗುಂಪಿನ ಮೇಲೆ ಜಗಳೂರು ಪಟ್ಟಣದ ಪೊಲೀಸರು ಮಂಗಳವಾರ ಸಂಜೆ ದಾಳಿ ಮಾಡ 15 ಜನರನ್ನು ಬಂಧಿಸಿದ್ದಾರೆ.
![ಜಗಳೂರು ಪೊಲೀಸರಿಂದ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ](http://suddivijaya.com/wp-content/uploads/2022/12/Screenshot_20221214-133925_Chrome.jpg)
ಪಿಎಸ್ಐ ಡಿ.ಸಾಗರ್ ನೇತೃತ್ವದಲ್ಲಿ ಪೊಲೀಸರು ಮಾಡಿದಾಗ ಅಂದರ್ ಬಹರ್ ಆಟವಾಡುತ್ತಿದ್ದ 15 ಜನರಿಂದ 4300 ರೂ. ವಶ ಪಡಿಸಿಕೊಂಡಿದ್ದಾರೆ ಹಾಗೂ ಜುಜಾಟಕ್ಕೆ ಬಳಸುತ್ತಿದ್ದ ಇಸ್ಪೀಟ್ ಎಲೆಗಳನ್ನು ಜಪ್ತ ಮಾಡಿ ಜಗಳೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 285/2022 ಕಲಂ 87 ಕೆಪಿ ಆಕ್ಟ್ ಅಡಿಯಲ್ಲಿ ಆರೋಪಿತರ ವಿರುದ್ಧ ಕ್ರಮ ಕೈಗೊಂಡಿದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.