ಕೊಣಚಗಲ್ ರಂಗನಾಥ ಸ್ವಾಮಿ ತಪ್ಪಿಲಿನ ಪುಷ್ಕರಣಿಯಲ್ಲಿ ಮುಳುಗಿ ಯುವಕ ಸಾವು

Suddivijaya
Suddivijaya March 18, 2023
Updated 2023/03/18 at 1:56 PM

ಸುದ್ದಿವಿಜಯ,ಜಗಳೂರು: ತಾಲೂಕಿನ ಕೊಣಚಗಲ್ ಗುಡ್ಡದ ಕೆಳಗಿನ ಐತಿಹಾಸಿಕ ಪುಷ್ಕರಣಿಯಲ್ಲಿ ಶನಿವಾರ ದಾವಣಗೆರೆ ನಗರದ ಯುವಕ ಫಾರುಖ್ (18) ಮುಳುಗಿ ಸಾವನ್ನಪ್ಪಿದ್ದಾರೆ.

ದಾವಣಗೆರೆ ಮೂಲದ ದಾದಪೀರ್ ಎಂಬುವರ ಪುತ್ರ ಫಾರುಖ್ ಅವರು ಪಕ್ಕದ ಸಂತೆಮುದ್ದಾಪುರದಲ್ಲಿರುವ ಸಂಬಂಧಿಕರ ಮನೆಗೆ ಬಂದಿ.

ಜಗಳೂರು ತಾಲೂಕಿನ ಕೊಣಚಗಲ್ ರಂಗಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಐತಿಹಾಸಿ ಪುಷ್ಕರಣಿಯಲ್ಲಿ ಮುಳುಗಿ ಯುವಕ ಸಾವು. ಮೃತದೇಹಕ್ಕಾಗಿ ಶೋಧ ನಡೆಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ
ಜಗಳೂರು ತಾಲೂಕಿನ ಕೊಣಚಗಲ್ ರಂಗಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಐತಿಹಾಸಿ ಪುಷ್ಕರಣಿಯಲ್ಲಿ ಮುಳುಗಿ ಯುವಕ ಸಾವು. ಮೃತದೇಹಕ್ಕಾಗಿ ಶೋಧ ನಡೆಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ

ಹಳೆಯ ಸ್ನೇಹಿತರೊಂದಿಗೆ ಕೊಣಚಗಲ್ ಬೆಟ್ಟದ ತಪ್ಪಲಿನಲ್ಲಿರುವ ಪುಷ್ಕರಣಿಯಲ್ಲಿ ಈಜಾಡಲು ಹೋಗಾದ ಅವಘಡ ಸಂಭವಿಸಿದೆ.

ಮೃತ ದೇಹಕ್ಕಾಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಶೋಧನಾ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ.

ಬಿಳಿಚೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮತ್ತು ಮುಳುಗು ತಜ್ಞರು ಪ್ರಯತ್ನ ಪಟ್ಟರೂ ಫಾರುಖ್ ಪತ್ತೆಯಾಗಲಿಲ್ಲ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!