ದಾವಣಗೆರೆಯಲ್ಲಿ ವರ್ತೂರು ಪ್ರಕಾಶ್ ಟ್ರಾಫಿಕ್ ಕ್ಲಿಯರ್ ಮಾಡಿದ್ದು ಏಕೆ?

Suddivijaya
Suddivijaya April 5, 2023
Updated 2023/04/05 at 3:32 PM

ಸುದ್ದಿವಿಜಯ,ದಾವಣಗೆರೆ: ರಾಜಕೀಯ ಪಕ್ಷದ ಮುಖಂಡ ವರ್ತೂರು ಪ್ರಕಾಶ್ ಬುಧವಾರ ಪಟ್ಟಣದಲ್ಲಿ ಉಂಟಾಗಿದ್ದ ಟ್ರಾಫಿಕ್ ನಿಯಂತ್ರಿಸುವ ಕೆಲಸ ಮಾಡಿದರು.

ದಾವಣಗೆರೆಯಲ್ಲಿ ಅಚ್ಚುಮೆಚ್ಚಿನ ಬೆಣ್ಣೆದೋಸೆ ಸವಿಯಲು ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಶ್ರೀಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್‍ಗೆ ತಮ್ಮ ಸ್ನೇಹಿತರೊಂದಿಗೆ ಆಗಮಿಸಿದ ವೇಳೆ ವಿಪರೀತ ಟ್ರಾಫಿಕ್ ಉಂಟಾಗಿತ್ತು.

ಆಗ ಅವರೇ ತಮ್ಮ ಕಾರ್‍ನಿಂದ ಇಳಿದು ಅಡ್ಡದಿಡ್ಡಿಯಾಗಿ ನಿಂತಿದ್ದ ವಾಹನಗಳನ್ನು ಸಿಗ್ನಲ್ ಕೊಡುವ ಮೂಲಕ ಮುಂದಕ್ಕೆ ಕಳುಹಿಸಿದರು.

ಇದರಿಂದ ಅನೇಕ ವಾಹನ ಸವಾರರಿಗೆ ಸುಲಭವಾಯಿತು. ಟ್ರಾಫಿಕ್ ಕ್ಲಿಯರ್ ಮಾಡಿದ ವರ್ತೂರು ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಅವರು ಸ್ನೇಹಿತರ ಜೊತೆ ಹೋಟೆಲ್‍ನಲ್ಲಿ ಬೆಣ್ಣೆದೋಸೆ ಸವಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!