sudddivijayanews17/06/2024
ಸುದ್ದಿವಿಜಯ, ಜಗಳೂರು: ತಾಲೂಕಿನ 57 ಕೆರೆ ತುಂಬಿಸುವ ಯೋಜನೆಯ ತುಂಗಭದ್ರಾ ನದಿಯಿಂದ ನೀರೆತ್ತುವ ಏತ ನೀರಾವರಿ ಯೋಜನೆಯ ಮೊದಲ ಹಂತದ ಕೆರೆಗಳಿಗೆ ನೀರು ಬಿಡುವ ಟ್ರಯಲ್ ರನ್ಗೆ ಕರ್ನಾಟಕ ನೀರಾವರಿ ನಿಗಮದ ದಾವಣಗೆರೆ ವಿಭಾಗದ ಎಂಜಿನಿಯರ್ ಗಳು ಚಾಲನೆ ನೀಡಿದ್ದು 16 ಕೆರೆಗಳಿಗೆ ಸೋಮವಾರ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು.
ಹರಿಹರದ ತುಂಗಭದ್ರಾ ನದಿಯಿಂದ ಚಟ್ನಳ್ಳಿ ಗುಡ್ಡದವರೆಗೆ ನೀರು ಹರಿಸಲು ಎರಡು ಮೋಟಾರ್ಗಳನ್ನು ಆನ್ ಮಾಡಲಾಗಿದೆ ಎಂದು ಎಇಇ ಶ್ರೀಧರ್ ಮತ್ತು ಎಇ ಆನಂದ್ ಮಾಹಿತಿ ನೀಡಿದರು.ಜಗಳೂರು ತಾಲೂಕಿನ ತುಪ್ಪದಹಳ್ಳಿ, ಚಟ್ನಳ್ಳಿ ಕೆರೆಗಳಿಗೆ ಪ್ರಾಯೋಗಿಕವಾಗಿ ಹರಿದ ನೀರು.
ಪ್ರಾರಂಭದಲ್ಲಿ ಅರಸಿಕೆರೆಯ ಉಚ್ಚಂಗಿದುರ್ಗ ಭಾಗದಲ್ಲಿರುವ ಯು.ಕಲ್ಲಹಳ್ಳಿ, ನಂದಿಕಂಬ, ಚಟ್ನಳ್ಳಿ, ಕುರೆಮಾಗನಹಳ್ಳಿ ಸೇರಿದಂತೆ ಆರು ಕೆರೆಗಳು ಮತ್ತು ಜಗಳೂರು ತಾಲೂಕಿನ ತುಪ್ಪದಹಳ್ಳಿ, ಹಾಲೇಕಲ್ಲು, ಚದರಗೊಳ್ಳ, ಮೆದಗಿನಕೆರೆ ಸೇರಿದಂತೆ 9 ಕೆರೆಗಳಿಗೆ ಎರಡು ಮೋಟರ್ ಮೂಲಕ ನೀರುನ್ನು ಹರಿಸಿ ಪ್ರಾಯೋಗಿಕವಾಗಿ ವೀಕ್ಷಿಸಲು ಹರಿ ಬಟ್ಟಿದ್ದೇವೆ.
ಆದರೆ ಆನ್ ಮಾಡಿರುವ ಎರಡು ಮೋಟರ್ಗಳಿಗೂ ನದಿಯಲ್ಲಿ ನೀರಿಲ್ಲ. ಏರ್ ಔಟ್ ಮಾಡುವ ಸಲುವಾಗಿ ಮೋಟರ್ಗಳನ್ನು ಆನ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ತುಂಗಭದ್ರಾ ನದಿ ಪಾತ್ರದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ಮಳೆಯಾದರೆ ಹೊಳೆ ತುಂಬುತ್ತದೆ. ಆದರೆ ಒಂದು ವಾರದಿಂದ ಮಳೆ ಸ್ಥಬದ್ಧವಾಗಿದ್ದು, ಮಳೆಗಾಗಿ ಕಾಯುತ್ತಿದ್ದೇವೆ ಎಂದು ಕನೀನಿಗಮದ ಎಂಜಿಯರ್ಗಳು ತಿಳಿಸಿದ್ದಾರೆ.