ಜಗಳೂರು: ಬಸವಣ್ಣನ ಸಿದ್ದಾಂತ, ತತ್ವಗಳು ಸರ್ವಕಾಲಕ್ಕೂ ಸತ್ಯ

Suddivijaya
Suddivijaya April 23, 2023
Updated 2023/04/23 at 12:44 PM

ಸುದ್ದಿವಿಜಯ, ಜಗಳೂರು: 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರು ಎಲ್ಲ ಕಾಲಕ್ಕೂ ಸತ್ಯಯುತ ವಚನ ಬೋಧನೆ ಸಮಾಜಿಕ ಸಮಾನತೆಯ ದ್ಯೋತಕ ಎಂದು ತಹಸೀಲ್ದಾರ್ ಜಿ.ಸಂತೋಷ್‍ಕುಮಾರ್ ಹೇಳಿದರು.

ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಬಸವಣ್ಣನವರ ಜಯಂತಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಮೇಲು ಕೀಳು ಎನ್ನದೇ ಸರ್ವರು ಸಮಾನರು ಎಂದು ಅನುಭವ ಮಂಟಪದಲ್ಲಿ ಸಾರಿದ ಮಹಾಪುರುಷರು. ಅವರ ಸಿದ್ದಾಂತಗಳೇ ಭಾರತದ ಸಂವಿಧಾನದ ಸ್ತಂಭಗಳಾಗಿವೆ. ಬಸವತತ್ವದ ಚಿಂತನೆಗಳೇ ಅಂಬೇಡ್ಕರ್ ಚಿಂತನೆಗಳಾಗಿವೆ ಎಂದು ಹೇಳಿದರು.

ಈ ವೇಳೆ ಚುನಾವಣಾಧಿಕಾರಿ ಎಸ್.ರವಿ, ವೀರಶೈವ ಲಿಂಗಾಯತ ಸಮುದಾಯ ಅಧ್ಯಕ್ಷ ಶಿವನಗೌಡ ಸೇರಿದಂತೆ ಅನೇಕರು ಇದ್ದರು. ಡಿಎಸ್‍ಎಸ್ ಮುಖಂಡ ಮಲೆಮಾಚಿಕೆರೆ ಸತೀಶ್, ತಾಲೂಕು ಕಚೇರಿ ಸಿಬ್ಬಂದಿ ಕಾಂತರಾಜು ಸೇರಿದಂತೆ ಅನೇಕ ಸಬ್ಬಂದಿ ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!